Select Your Language

Notifications

webdunia
webdunia
webdunia
webdunia

ಕಣ್ಣಮುಂದೆ ಪತ್ನಿ ಮೇಲೆ ಹರಿದ ಬಸ್ಸು

ಕಣ್ಣಮುಂದೆ ಪತ್ನಿ ಮೇಲೆ ಹರಿದ ಬಸ್ಸು
bangalore , ಗುರುವಾರ, 17 ಆಗಸ್ಟ್ 2023 (19:30 IST)
ಗುಂಡಿ ಬಿದ್ದ ರಸ್ತೆಗೆ ಇನ್ನೆಷ್ಟು ಬಲಿ ಬೇಕು..?ಈ ದೃಶ್ಯ ನೋಡಿದ್ರೆ  ಕಣ್ಣಲ್ಲಿ ನೀರು ಜಿನುಗುತ್ತೆ. ಮಾಗಡಿರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಭೀಕರ ‌ಅಪಘಾತ ಸಂಭವಿಸಿದೆ.
 
ಇನ್ನೂ ಸರಿಯಾಗದ ರಸ್ತೆ, ಹೆಸರಿಗಷ್ಟೆ ಕಾಮಗಾರಿ ಮಾಡಿದ್ದಾರೆ.ಕಳೆದ ಶನಿವಾರವಷ್ಟೆ ಇದೇ ರಸ್ತೆಯಲ್ಲಿ ಯುವಕನೊಬ್ಬ ಲಾರಿಗೆ ಸಿಲುಕಿ ಮೃತ ಪಟ್ಟಿದ್ದ.ಇಂದು 58 ವರ್ಷದ ಸುಮಂಗಲ ಮೃತರಾಗಿದ್ದಾರೆ. ಪತಿ ಶರಣಪ್ಪ ಜೊತೆಗೆ ಸ್ಕೂಟರ್ ನಲ್ಲಿ ತೆರಳುವಾಗ  ಅಪಘಾತವಾಗಿದೆ.ರಸ್ತೆಯಲ್ಲಿದ್ದ ಕಲ್ಲು ಟಯರ್ ಗೆ ಸಿಲುಕಿ ಸ್ಕೂಟರ್ ಸ್ಕಿಡ್ ಆಗಿ ಅಪಘಾತವಾಗಿದ್ದು,ಖಾಸಗಿ ಸ್ಕೂಲ್ ಬಸ್ ಸುಮಮಂಗಲ ತಲೆ ಮೇಲೆ ಹರಿದಿದೆ. ಪರಿಣಾಮ ಸುಮಂಗಲ ಸ್ಥಳಸಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿಗೆ 1 ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆ