Select Your Language

Notifications

webdunia
webdunia
webdunia
webdunia

₹10ಕ್ಕೆ 5 ಸಿಗುತ್ತಿದ್ದ ಲಿಂಬೆ ಇದೀಗ ಕೇವಲ 2, ಇದೆಲ್ಲ ಬಿಸಿಲ ಪ್ರಭಾವ

Summer Price Hike
Photo Credit X
ಬೆಂಗಳೂರು: ಮಧ್ಯಾಹ್ನದ ಸುಡು ಬಿಸಿಲಿನೊಂದಿಗೆ ಸಂಜೆ ವೇಳೆ ಸುರಿಯುವ ಸಾಧಾರಣ ಮಳೆಯಿಂದಾಗುವ ಸೆಕೆಗೆ ರಾಜ್ಯದ ಜನತೆ ಸುಸ್ತಾಗಿದ್ದಾರೆ. 

ಇನ್ನೂ ಈ ಸೆಕೆಗೆ ದೇಹವನ್ನು ತಂಪಾಗಿರಿಸಲು ಹಾಗೂ ದಾಹವನ್ನು ಸರಿತೂಗಿಸಲು ಜನರು ಜ್ಯೂಸ್ ಹಾಗೂ ತಂಪು ಪಾನೀಯವನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. 

ಇದರ ಪರಿಣಾಮ ಲಿಂಬೆ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.₹10ಕ್ಕೆ 5 ಸಿಗುತ್ತಿದ್ದ ಲಿಂಬೆ ಹಣ್ಣು ಇದೀಗ ಕೇವಲ 2 ಸಿಗುತ್ತಿದೆ. ಇನ್ನು  ಇದರ ಜತೆಗೆ ಪಾನೀಯಗಳು ಮತ್ತು ಇತರ ಕೂಲಿಂಗ್ ರಿಫ್ರೆಶ್‌ಮೆಂಟ್‌ಗಳಿಗೆ  ಸ್ಥಳೀಯ ಮಾರುಕಟ್ಟೆಯಾದ್ಯಂತ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ.

ತೀವ್ರವಾದ ಶಾಖವು ಜನರನ್ನು ತಂಪಾಗಿಸುವ ಪಾನೀಯಗಳಾದ ಮಜ್ಜಿಗೆ, ನಿಂಬೆ ರಸ ಮತ್ತು ಕೋಮಲ ತೆಂಗಿನಕಾಯಿಯಂತಹ ಪಾನೀಯಗಳತ್ತ ತಳ್ಳಿದೆ, ಇದು ಅವುಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.

ಇನ್ನೂ ಇದರ ಜತೆಗೆ ಎಳನೀರು ಕೂಡಾ ಈ ಸಂದರ್ಭದಲ್ಲಿ ಹೆಚ್ಚು ಸೇವಿಸುತ್ತಾರೆ. ಆದ್ದರಿಂದ ಇದೀಗ ಎಳನೀರಿನ ಬೆಲೆ ಗರಿಷ್ಠ 60ಕ್ಕೆ ಏರಿಕೆಯಾಗಿದೆ. ಆದರೆ ಆರೋಗ್ಯವನ್ನು ಕಾಪಾಡುವಲ್ಲಿ ಇದು ತುಂಬಾನೇ ಸಹಕಾರಿಯಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಕರಡಿ ಕೊನೆಗೂ ಸೆರೆ