Publish Date: Tue, 14 Nov 2023 (10:40 IST)
Updated Date: Tue, 14 Nov 2023 (09:41 IST)
ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಚ್ಚುವ ಪಟಾಕಿಗಳಿಂದ ಎಷ್ಟೋ ಜನರ ಬದುಕಿಗೆ ಕತ್ತಲೆಯಾಗುವುದಿದೆ. ಈ ಬಾರಿ ಬೆಂಗಳೂರಿನಲ್ಲಿ ಪಟಾಕಿಯಿಂದಾಗಿ 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಕಳೆದ ಬಾರಿಗೆ ಹೋಲಿಸಿದರೆ ಪಟಾಕಿ ಅಬ್ಬರ ಕೊಂಚ ಕಡಿಮೆ ಎನ್ನಬಹುದು. ಹಾಗಿದ್ದರೂ ಅಲ್ಲಲ್ಲಿ ಪಟಾಕಿಯಿಂದ ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇರಿದಂತೆ ನಗರದಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಕೆಲವರು ಮಕ್ಕಳೂ ಸೇರಿದ್ದಾರೆ. ದುರದೃಷ್ಟವಶಾತ್ ರಸ್ತೆಯಲ್ಲಿ ನಡೆದಾಡುತ್ತಿದ್ದವರಿಗೂ ಗಾಯವಾಗಿದೆ.