Publish Date: Sat, 10 Feb 2024 (14:23 IST)
Updated Date: Sat, 10 Feb 2024 (14:27 IST)
ಬೆಂಗಳೂರು-129 ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಶಾಕ್ ಎದುರಾಗಿದೆ.ನಗರದಲ್ಲಿ 129 ಖಾಸಗಿ ಶಾಲೆಗಳು ನೋಂದಾಣಿಯಾಗಿಲ್ಲ ಹೀಗಾಗಿ SSLC ಪ್ರವೇಶ ಪತ್ರವನ್ನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಡೆಹಿಡಿದಿದೆ.2023-24 ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಮಾಡಿಕೊಳ್ಳದ 129 ಖಾಸಗಿ ಪ್ರೌಢಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಢವ ಢವ ಶುರುವಾಗಿದೆ.
ಶಾಲೆಗಗಳಿಗೆ ಅನಧಿಕೃತ ಎಂದು ಮಂಡಳಿ ಸ್ಪಷ್ಟನೆ ನೀಡಿದ್ದು, 15 ದಿನಗಳ ಕಾಲ ಶಾಲೆಗಳಿಗೆ ಡೆಡ್ ಲೈನ್ ಕೊಟ್ಟಿದೆ.129 ಶಾಲೆಗಳ ಪೈಕಿ 36 ಶಾಲೆಗಳು ಬೆಂಗಳೂರು ದಕ್ಷಿಣ ವಿಭಾಗದಲ್ಲಿ,ಬೆಂ.ಉತ್ತರ, ತುಮಕೂರು, ಶಿವಮೊಗ್ಗದ ಜಿಲ್ಲೆಗಳಲ್ಲೂ ಶಾಲೆಗಳೂ ಮಾನ್ಯತೆ ಪಡೆದುಕೊಳ್ಳದೇ ಇರುವ ಶಾಲೆಗಳು ಅನಧಿಕೃತವಾಗಲಿದ್ದು, ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಸಹ ಅನಧಿಕೃತರಾಗುತ್ತಾರೆ.ಕರಡು ಪ್ರತಿ ಬಿಡುಗಡೆ ವೇಳೆಯಲ್ಲೇ ಇಂತಹ ಶಾಲೆಗಳಿಗೆ ಮಂಡಳಿ ಎಚ್ಚರಿಕೆ ನೀಡಿದೆ.