Webdunia - Bharat's app for daily news and videos

Install App

ಶಾಲೆಯಲ್ಲಿ ಪೋಷಕರ ಕಲ್ಲು ತೂರಾಟ - ವೈರಲ್ ವೀಡಿಯೋ

ಅತಿಥಾ
ಶುಕ್ರವಾರ, 23 ಫೆಬ್ರವರಿ 2018 (19:52 IST)
ಅಂಕೋಲಾ ತಾಲ್ಲೂಕಿನ ಹಾರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪೋಷಕರು ಗುರುವಾರ ಪರಸ್ಪರ ಚಪ್ಪಲಿ, ಕಲ್ಲುಗಳಿಂದ ಹೊಡೆದುಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಹಾರವಾಡದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಇದನ್ನೇ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ತಾಯಿ ಸುರೇಖಾ ಹಾಗೂ ಆತನ ಅಜ್ಜಿ ಮತ್ತೊಬ್ಬ ವಿದ್ಯಾರ್ಥಿಗೆ ಶಾಲಾ ಆವರಣದಲ್ಲೇ ಚಪ್ಪಲಿಯಿಂದ ಹೊಡೆದಿದ್ದರು. ಈ ವಿಚಾರವಾಗಿ ಗ್ರಾಮದ ಮುಖಂಡರು, ಹೊಡೆತ ತಿಂದ ವಿದ್ಯಾರ್ಥಿ ಹಾಗೂ ಅವನ ತಾಯಿ ಕಾಂಚನಾ ಅವರೊಂದಿಗೆ ಶಾಲೆಗೆ ತೆರಳಿ ಘಟನೆ ಕುರಿತು ಶಿಕ್ಷಕರನ್ನು ಪ್ರಶ್ನಿಸಿದರು. ಈ ಬಗ್ಗೆ ಚರ್ಚಿಸಲು ಶಾಲಾಭಿವೃದ್ಧಿ ಸಮಿತಿಯು ಗುರುವಾರ ಬೆಳಿಗ್ಗೆ ಪೋಷಕರ ಸಭೆ ಕರೆದಿತ್ತು. 
 
ಇದನ್ನು ತಿಳಿದ ಸುರೇಖಾ ಚೀಲದಲ್ಲಿ ಕಲ್ಲು ತುಂಬಿಕೊಂಡು ಸಭೆಗೆ ಬಂದಿದ್ದರು. ಬಳಿಕ ಸಭೆಯಲ್ಲಿ ಮಹಿಳೆಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಸುರೇಖಾ ಕಲ್ಲು ತೂರಲು ಆರಂಭಿಸಿದ್ದರು. ಅವರೊಂದಿಗಿದ್ದ ಅಜ್ಜಿಯೂ ಜಗಳಕ್ಕಿಳಿದರು. ಬಳಿಕ ರೊಚ್ಚಿಗೆದ್ದ ಗ್ರಾಮದ ಇತರ ಮಹಿಳೆಯರು ಕಲ್ಲು ತೂರುತ್ತಿದ್ದ ಮಹಿಳೆಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
 
ಗಲಾಟೆ ನಡೆದ ಸ್ಥಳಕ್ಕೆ ಬಂದ ಪೋಲೀಸರು ಪೋಷಕರನ್ನು ಸಮಧಾನಪಡಿಸಿ ಒಂದುಗೂಡಿಸಿದ್ದಾರೆ. ಗಲಾಟೆ ನಡೆಸಿದ ಮಹಿಳೆಯಿಂದ ಮುಚ್ಚಳಿಕೆಯನ್ನು ಪೊಲೀಸರು ಬರೆಸಿಕೊಂಡಿದ್ದಾರೆ.
 
ಇನ್ನು ಮಹಿಳೆಯರ ಕಲ್ಲು ತೂರಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ರಾಹುಲ್ ಗಾಂಧಿ ಸಂವಿಧಾನವನ್ನೇ ಓದಿಲ್ಲ: ಕಿರಣ್‌ ರಿಜಿಜು ಆಕ್ರೋಶ

ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

ಆಪರೇಷನ್ ಸಿಂಧೂರ್‌ ಕಾರ್ಯಚರಣೆಯ ಕೆಚ್ಚೆದೆಯ 9 ವೀರರಿಗೆ ವೀರ ಚಕ್ರ ಪ್ರಶಸ್ತಿ

ಧರ್ಮಸ್ಥಳ: ಮೊದಲು ಅನಾಮಿಕನ ಗುರುತು ಬಹಿರಂಗಪಡಿಸಲಿ, ಅಶೋಕ್ ಒತ್ತಾಯ

ಮುಂದಿನ ಸುದ್ದಿ
Show comments