Webdunia - Bharat's app for daily news and videos

Install App

ನಿನ್ನೆ ಬಿಗ್ ಬಾಸ್ ಫಿನಾಲೆ ಪ್ರಸಾರದಲ್ಲಾಗಿತ್ತು ಅಡಚಣೆ..!

Webdunia
ಸೋಮವಾರ, 9 ಆಗಸ್ಟ್ 2021 (07:40 IST)
Bigg Boss Kannada 8: ನಿನ್ನೆ ಫಿನಾಲೆ ಸಂಚಿಕೆಯ ಪ್ರಸಾರದ ನಡುವೆ ಬರುತ್ತಿದ್ದ ಹೊಸ ಜಾಹೀರಾತುಗಳನ್ನು ನೋಡಿ ಸಾಕಷ್ಟು ಮಂದಿ ಅಸಮಾನಗೊಂಡಿದ್ದರು. ಈ ಕುರಿತಾಗಿ ತುಂಬಾ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನೂ ಹೊರ ಹಾಕಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಾಗಿದ್ದ ಅಡಚಣೆಗೆ ಕಾರಣ ಏನೆಂದು ಸುದೀಪ್ ತಿಳಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆಯ (Bigg Boss Kannada Season 8 Finale) ಪ್ರಸಾರ ಬದಲಾದ ಸಮಯದಲ್ಲಿ ಆಗಲಿದೆ ಎಂದು ಮುಂಚಿತವಾಗಿಯೇ ಪ್ರಕಟಿಸಲಾಗಿತ್ತು. ಪ್ರತಿ ವಾರಾಂತ್ಯದ ಸಂಚಿಕೆಗಳು ರಾತ್ರಿ 9ಕ್ಕೆ ಪ್ರಸಾರವಾಗುತ್ತಿತ್ತು. ಆದರೆ ಫಿನಾಲೆ ಪ್ರಸಾರವನ್ನು ಸಂಜೆ 6ಕ್ಕೆ ಆರಂಭಿಸುವುದಾಗಿ ಬಿಗ್ ಬಾಸ್ ತಂಡ ಹೇಳಿಕೊಂಡಿತ್ತು. ಬಿಗ್ ಬಾಸ್ ವೀಕ್ಷಕರು ನಿನ್ನೆ ಸಂಜೆ ಇನ್ನೇನು ಫಿನಾಲೆ ಕಾರ್ಯಕ್ರಮ ಆರಂಭವಾಯ್ತು ಅಂತ ಕಾಯುತ್ತಿದ್ದರು. ಈಗ ಆಯ್ತು, ಆಗ ಆಯ್ತು ಅಂತ ಟಿವಿ ಮುಂದೆ ಕುಳಿತು ಕಾಯುತ್ತಿದ್ದರು. ಆದರೆ 6ಕ್ಕೆ ಆರಂಭವಾಗಬೇಕಿದ್ದ ಸಂಚಿಕೆ ಕಡೆಗೆ 6.30ಕ್ಕೆ ಆಯಿತು. ಅಂತೆಯೇ ರಾತ್ರಿ 11ಕ್ಕೆ ಮುಗಿಯಬೇಕಿದ್ದ ಸಂಚಿಕೆ 12ರವರೆಗೆ ಹೋಯಿತು. ಅಲ್ಲದೆ ಬಿಗ್ ಬಾಸ್ ಫಿನಾಲೆ ಸಂಚಿಕೆ ಪ್ರಸಾರವಾಗುತ್ತಿದ್ದಾಗ ಬರುತ್ತಿದ್ದ ಜಾಹೀರಾತುಗಳು ಯಾವ ಕೊನೆಗೊಳ್ಳಲಿದೆ ಅನ್ನೋದು ಸಹ ತಿಳಿಯುತ್ತಿರಲಿಲ್ಲ. ಎಷ್ಟೋ ಜನರಿಗೆ ಇಂದಿನ ಸಂಚಿಕೆ ಮುಕ್ತಾಯವಾಯ್ತಾ ಅಥವಾ ಮುಂದುವರೆಯಲಿದಾ  ಅನ್ನೋದು ತಿಳಿಯದೆ ಹೋಗಿತ್ತು.

ನಿನ್ನೆ ಫಿನಾಲೆ ಸಂಚಿಕೆಯ ಪ್ರಸಾರದ ನಡುವೆ ಬರುತ್ತಿದ್ದ ಹೊಸ ಜಾಹೀರಾತುಗಳನ್ನು ನೋಡಿ ಸಾಕಷ್ಟು ಮಂದಿ ಅಸಮಾನಗೊಂಡಿದ್ದರು. ಈ ಕುರಿತಾಗಿ ತುಂಬಾ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನೂ ಹೊರ ಹಾಕಿದ್ದಾರೆ. ಇದು ಬಿಗ್ ಬಾಸ್ ಫಿನಾಲೆಯೋ ಅಥವಾ ಹೊಸ ಕಾರ್ಯಕ್ರಮಗಳ ಪ್ರಚಾರ ಮಾಡುವ ಸಂಚಿಕೆಯೋ ಎಂದೆಲ್ಲ ಬೇಸರ ವ್ಯಕ್ತಪಡಿಸಿದ್ದಾರೆ. ವೀಕ್ಷಕರು ನಿನ್ನೆಯ ಸಂಚಿಕೆಯಲ್ಲಿ ಎದುರಿಸಿದ ಸಮಸ್ಯೆಗೆ ಕಾರಣ ಏನೆಂದು ಸುದೀಪ್ ಅವರು ಇವತ್ತು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಫಿನಾಲೆಯ ಶೂಟಿಂಗ್ ಅನ್ನು ಮೂರು ನಾಲ್ಕು ಗಂಟೆ ಮೊದಲೇ ಮಾಡಲಾಗಿರುತ್ತದೆ. ನಂತರ ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತದೆ. ಆದರೆ ಶನಿವಾರ ಬಿಗ್ ಬಾಸ್ ಶೂಟಿಂಗ್ ಸೆಟ್ನಲ್ಲಿ ಇಂಟರ್ನೆಟ್ ಸಮಸ್ಯೆಯಿಂದಾಗಿ ಇಷ್ಟೆಲ್ಲ ಸಮಸ್ಯೆ ಆಗಿತ್ತು. ಶೂಟ್ ಮಾಡಲಾಗಿದ್ದ ಎಪಿಸೋಡ್ಗಳನ್ನು ನೋಯ್ಡಾಗೆ ಕಳುಹಿಸಲಾಗಿತ್ತದೆ. ನಂತರ ಅದು ವಾಪಸ್ ಬಂದ ಮೇಲೂ ಸುಮಾರು ಕೆಲಸಗಳಿರುತ್ತವೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ನಿನ್ನೆ ಜಾಹೀರಾತುಗಳನ್ನು ಹಾಕಿಕೊಂಡು ಹೇಗೋಕಾರ್ಯಕ್ರಮವನ್ನು ಪ್ರಸಾರ ಮಾಡಿದೆವು. ಲಾಕ್ಡೌನ್ನಿಂದಾಗಿ ಅರ್ಧಕ್ಕೆ ನಿಂತಿದ್ದ ಕಾರ್ಯಕ್ರಮದ ಫಿನಾಲೆ ನಡೆಯುತ್ತೆ, ವೇದಿಕೆಯ ಮೇಲೆ ನಾವು ಇರುತ್ತೇವೆ ಎಂದೂ ಊಹೆಯೂ ಮಾಡಿರಲಿಲ್ಲ ಎಂದು ಸುದೀಪ್ ಹೇಳಿದ್ದಾರೆ.

 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments