Publish Date: Tue, 30 Mar 2021 (06:58 IST)
Updated Date: Tue, 30 Mar 2021 (07:03 IST)
ಚೆನ್ನೈ : 38 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಸಹೋದರ ಸೇರಿ ಸಿಲಿಂಡರ್ ಸ್ಪೋಟಗೊಳಿಸಿ ಕೊಲೆ ಮಾಡಿದ ಘಟನೆ ಮೈಲಾಪುರ ಪ್ರದೇಶದಲ್ಲಿ ನಡೆದಿದೆ.
ವ್ಯಕ್ತಿ ಪದೇ ಪದೇ ತನ್ನ ಪತ್ನಿಯ ಬಳಿ ಮದ್ಯ ಸೇವಿಸಲು ಹಣ ಕೇಳುತ್ತಿದ್ದನ್ನು. ಇದಕ್ಕೆ ಆಕೆ ನಿರಾಕರಿಸಿದಾಗ ಆಕೆಯನ್ನು ಥಳಿಸುತ್ತಿದ್ದ. ಇದರಿಂದ ಕೋಪಗೊಂಡ ಪತ್ನಿ ತನ್ನ ಸಹೋದರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆಯ ವೇಳೆ ಪತ್ನಿ ತವರು ಮನೆಯಲ್ಲಿದ್ದ ಕಾರಣ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ಸತ್ಯಾಂಶ ಬಾಯ್ಬಿಟ್ಟಿದ್ದಾಳೆ.