Publish Date: Wed, 01 Mar 2023 (09:10 IST)
Updated Date: Wed, 01 Mar 2023 (09:13 IST)
ಹೈದರಾಬಾದ್: ಇತ್ತೀಚೆಗೆ ಅಮೆರಿಕಾದಲ್ಲಿ ಭಾರತದ ಆರ್ ಆರ್ ಆರ್ ಸಿನಿಮಾ ಐದು ವಿಭಾಗಗಳಲ್ಲಿ ಎಚ್ ಸಿಎ ಸಿನಿಮಾ ಪ್ರಶಸ್ತಿ ಪಡೆದುಕೊಂಡಿತ್ತು.
ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಕೀರವಾಣಿ ಮತ್ತು ನಾಯಕ ನಟರಲ್ಲೊಬ್ಬರಾದ ರಾಮ್ ಚರಣ್ ತೇಜಾ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಜ್ಯೂ.ಎನ್ ಟಿಆರ್ ಈ ಬಳಗದಲ್ಲಿರಲಿಲ್ಲ.
ಈ ಬಗ್ಗೆ ತಾರಕ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎಚ್ ಸಿಎ ನಾವು ಜ್ಯೂ.ಎನ್ ಟಿಆರ್ ಗೂ ಕರೆ ನೀಡಿದ್ದೆವು. ಆದರೆ ಅವರು ಭಾರತದಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ಆಗಮಿಸಿರಲಿಲ್ಲ. ಮುಂದೆ ಅವರ ಪಾಲಿನ ಪ್ರಶಸ್ತಿಯನ್ನು ಅವರಿಗೆ ತಲುಪಿಸಲಾಗುವುದು ಎಂದಿದ್ದಾರೆ.