Webdunia - Bharat's app for daily news and videos

Install App

ಬಿಗ್ ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಚಪ್ಪಲಿ ಧರಿಸದೇ ಬರಲು ಇವರೇ ಕಾರಣ

Krishnaveni K
ಭಾನುವಾರ, 6 ಅಕ್ಟೋಬರ್ 2024 (16:25 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ನಿನ್ನೆ ಮೊದಲ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಪ್ರಸಾರವಾಗಿತ್ತು. ಈ ಎಪಿಸೋಡ್ ಗೆ ಬರುವಾಗ ಕಿಚ್ಚನ ಕಾಲಿಗೆ ಚಪ್ಪಲಿಯೇ ಧರಿಸಿರಲಿಲ್ಲ. ಇದಕ್ಕೆ ಕಾರಣ ಈಗ ಬಯಲಾಗಿದೆ.

ಕಿಚ್ಚ ಸುದೀಪ್ ಸಾಮಾನ್ಯವಾಗಿ ಡ್ರೆಸ್ ಜೊತೆಗೆ ಸಖತ್ ಸ್ಟೈಲಿಶ್ ಚಪ್ಪಲಿ, ಶೂ ಧರಿಸಿಯೇ ವೇದಿಕೆಗೆ ಬರುತ್ತಾರೆ. ಆದರೆ ಈ ಬಾರಿ ಕಿಚ್ಚ ಬರಿಗಾಲಲ್ಲಿ ಬಂದಿದ್ದು ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ಇದಕ್ಕೆ ಅವರು ಕಾರಣವನ್ನೂ ವೇದಿಕೆಯಲ್ಲಿಯೇ ನೀಡಿದ್ದಾರೆ. ಇದಕ್ಕೆಲ್ಲಾ ತಮ್ಮ ಅಮ್ಮನೇ ಕಾರಣ ಎಂದಿದ್ದಾರೆ.

ಇದೀಗ ನವರಾತ್ರಿ ಆರಂಭವಾಗಿದ್ದು, ಅಮ್ಮನಿಗಾಗಿ ಸುದೀಪ್ ವ್ರತ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಾಲಿಗೆ ಚಪ್ಪಲಿ ಧರಿಸದೇ ಬರಿಗಾಲಲ್ಲಿ ವೇದಿಕೆಗೆ ಬಂದಿದ್ದರು. ಜೊತೆಗೆ ಅಮ್ಮನ ಅಣತಿಯಂತೆ ಬೂದು ಬಣ್ಣದ ಡ್ರೆಸ್ ನಲ್ಲಿ ಬಂದಿದ್ದರು. ಹೀಗಾಗಿ ಕಾರ್ಯಕ್ರಮ ಆರಂಭವಾಗುವ ಮೊದಲು ಈಗ ಓಕೆನಾ ಅಮ್ಮ ಎಂದು ಕೇಳಿಯೇ ಸುದೀಪ್ ಕಾರ್ಯಕ್ರಮ ಆರಂಭಿಸಿದ್ದಾರೆ.

ಇನ್ನು ನಿನ್ನೆಯ ಶೋನಲ್ಲಿ ಸುದೀಪ್ ಮನೆಯವರಿಗೆ ಅದರಲ್ಲೂ ವಿಶೇಷವಾಗಿ ಲಾಯರ್ ಜಗದೀಶ್ ಗೆ ಅವರು ಮಾಡಿದ ತಪ್ಪುಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇಂದು ಸಂಡೇ ವಿತ್ ಸುದೀಪ್ಇರಲಿದ್ದು, ಈ ವಾರ ಮನೆಯಿಂದ ಹೊರಹೋಗಲಿರುವ ಸ್ಪರ್ಧಿ ಯಾರು ಎಂದು ಇಂದು ಅಧಿಕೃತವಾಗಿ ಕಿಚಚ ಘೋಷಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಸಿನಿಮಾ ನಿರ್ಮಾಪಕನ ವಿರುದ್ಧ ಇದೆಂಥಾ ಆರೋಪ

ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿ ನಿನಗಾಗಿ ಸೀರಿಯಲ್‌ನ ನಟ ರಿತ್ವಿಕ್ ಮಠದ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಜೈಲು ಹಕ್ಕಿ ದರ್ಶನ್ ಗೆ ಇಂದು ಪತ್ನಿ ನೋಡೋ ಭಾಗ್ಯ

ಮುಂದಿನ ಸುದ್ದಿ
Show comments