Select Your Language

Notifications

webdunia
webdunia
webdunia
webdunia

ರಕ್ಷಿತ್-ರಶ್ಮಿಕಾ ಬ್ರೆಕ್ ಅಪ್ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿದ್ದೇನು?

ರಕ್ಷಿತ್-ರಶ್ಮಿಕಾ ಬ್ರೆಕ್ ಅಪ್ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 5 ಅಕ್ಟೋಬರ್ 2018 (07:20 IST)
ಬೆಂಗಳೂರು : ಗೀತ ಗೋವಿಂದಂ ಚಿತ್ರದಲ್ಲಿನ ಕಿಸ್ ದೃಶ್ಯಗಳು ವೈರಲ್ ಆದ ಕಾರಣದಿಂದ ಸ್ಯಾಂಡಲ್ ವುಡ್ ತಾರಾ ಜೋಡಿ ರಷ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ಎಂಗೇಜ್ ಮೆಂಟ್  ಬ್ರೆಕ್ ಅಪ್ ಆಗಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಗೀತ ಗೋವಿಂದಂ ಚಿತ್ರದ ನಾಯಕ ನಟ ವಿಜಯ್ ದೇವರಕೊಂಡ ಈ ಬಗ್ಗೆ  ಮಾತನಾಡಿದ್ದಾರೆ.


ತಮ್ಮ ಮುಂಬರುವ ಚಿತ್ರ 'ನೋಟಾ' ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಟ ವಿಜಯ್ ದೇವರಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗೀತ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ರಶ್ಮಿಕಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ಗೀತ ಗೋವಿಂದಂ ಸಿನಿಮಾದ ಆ ದೃಶ್ಯ ಲಿಕ್ ಚಿತ್ರತಂಡಕ್ಕೂ ಸಮಸ್ಯೆಯಾಯಿತು. ಆದರೆ ಇದು ಸಿನಿಮಾಗೆ ಮಾತ್ರ ಸೀಮಿತವಾಗಿತ್ತು. ಚಿತ್ರತಂಡದಲ್ಲಿ ನಾನೊಬ್ಬ ಕಲಾವಿದ ಅಷ್ಟೆ. ಸಿನಿಮಾದ ಕಿಸ್ ದೃಶ್ಯದಿಂದಲೇ ರಕ್ಷಿತ್ ಶೆಟ್ಟಿ-ರಶ್ಮಿಕಾ ಸಂಬಂಧ ಮುರಿದುಬಿದ್ದಿರುವುದಕ್ಕೆ ನನಗೂ ಕೂಡ ತುಂಬಾ ಬೇಸರವಾಗಿದೆ ಎಂದಿದ್ದಾರೆ.


ಆದರೆ ಅವರಿಬ್ಬರ ಖಾಸಗಿ ಜೀವನಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇತ್ತೀಚಿನ ಸಿನಿಮಾಗಳಲ್ಲಿ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುತ್ತಿರುವ ರಕ್ಷಿತ್ ಶೆಟ್ಟಿ ಅವರ ಕೆಲಸದ ಬಗ್ಗೆ ನನಗೆ ಅಪಾರ ಮೆಚ್ಚುಗೆಯಿದೆ. ಇಬ್ಬರಿಗೂ ನಾನು ತುಂಬಾ ಗೌರವ ಕೊಡುತ್ತೇನೆ. ಆದರೆ ಇವರಿಬ್ಬರ ಬಾಂಧವ್ಯ ಬ್ರೇಕಪ್ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ವಿಚಾರದ ಬಗ್ಗೆ ರಷ್ಮಿಕಾ - ರಕ್ಷಿತ್ ಒಟ್ಟಾಗಿ ಕುಳಿತು ಪರಸ್ಪರ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಮಾಧ್ಯಮಗಳು ಕೂಡ ಬೇರೆಯವರ ಖಾಸಗಿ ವಿಚಾರಗಳನ್ನು ವೈಭವಿಯುತವಾಗಿ ಬಿತ್ತರಿಸುವುದು ಅಷ್ಟು ಒಳ್ಳೆಯದಲ್ಲ. ಸದ್ಯ ಆಗಿರುವುದೇ ಸಾಕು. ಇಬ್ಬರು ತಮ್ಮಿಷ್ಟಕ್ಕೆ ತಾವು ಇರಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರು ; ಅರ್ಧಕ್ಕೆ ನಿಂತ ಸೈನಾ ನೆಹ್ವಾಲ್ ಚಿತ್ರದ ಶೂಟಿಂಗ್