Select Your Language

Notifications

webdunia
webdunia
webdunia
webdunia

ಕದ್ದಚಿತ್ರ ಟ್ರೈಲರ್ ಲಾಂಚ್ ವೇಳೆ ಪತ್ನಿ ನೆನೆದು ಅತ್ತ ವಿಜಯ್ ರಾಘವೇಂದ್ರ

ಕದ್ದಚಿತ್ರ ಟ್ರೈಲರ್ ಲಾಂಚ್ ವೇಳೆ ಪತ್ನಿ ನೆನೆದು ಅತ್ತ ವಿಜಯ್ ರಾಘವೇಂದ್ರ
ಬೆಂಗಳೂರು , ಭಾನುವಾರ, 27 ಆಗಸ್ಟ್ 2023 (07:20 IST)
ಬೆಂಗಳೂರು: ಪತ್ನಿ ಸ್ಪಂದನಾ ನಿಧನದ ಬಳಿಕ ಇದೇ ಮೊದಲ ಬಾರಿಗೆ ವಿಜಯ್ ರಾಘವೇಂದ್ರ ಸಿನಿಮಾ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು.

ತಮ್ಮ ಮುಂಬರುವ ಕದ್ದ ಚಿತ್ರ ಸಿನಿಮಾ ಟ್ರೈಲರ್ ಲಾಂಚ್ ಗೆ ವಿಜಯ್ ರಾಘವೇಂದ್ರ ಆಗಮಿಸಿದ್ದರು. ಈ ವೇಳೆ ಅಗಲಿದ ಪತ್ನಿಯ ನೆನೆದು ಭಾವುಕರಾಗಿ ವೇದಿಕೆಯಲ್ಲೇ ಕಣ್ಣೀರು ಹಾಕಿದರು.

ನನ್ನ ಕಷ್ಟದ ಸಮಯದಲ್ಲಿ ನೀವೆಲ್ಲರೂ ತಾಯಿಯ ಸ್ಥಾನದಲ್ಲಿ ನಿಂತು ಸಮಾಧಾನ ಮಾಡಿದ್ದೀರಿ. ನನ್ನ ಜೊತೆಗೆ ನಿಂತಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು ಎಂದ ವಿಜಯ್ ರಾಘವೇಂದ್ರ ಇಂತಹ ಪರಿಸ್ಥಿತಿಯಲ್ಲೂ ವೇದಿಕೆಗೆ ಬರುವುದು ಕಷ್ಟವಾದರೂ ನಮಗಾಗಿ ಸಿನಿಮಾ ಮಾಡಿದ ನಿರ್ಮಾಪಕರಿಗೆ ತೊಂದರೆಯಾಗಬಾರದು. ಅವರಿಗೆ ಜೊತೆಯಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂಬ ಕಾರಣಕ್ಕೆ ಬಂದಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಜನ್ಮದಿನದಂದು ಕಿಚ್ಚ-ದಚ್ಚು ಮುಖಾಮುಖಿ?