Select Your Language

Notifications

webdunia
webdunia
webdunia
webdunia

ಮೊದಲ ಬಾರಿ ನನ್ನ ಕಟೌಟ್‌ ನಿಲ್ಲಿಸಿದ್ದು ನೋಡಿ ಭಾವುಕರಾದ ತುಕಾಲಿ ಸಂತೋಷ್

Tukali Santhosh

sampriya

ಬೆಂಗಳೂರು , ಶನಿವಾರ, 25 ಮೇ 2024 (16:01 IST)
Photo By Instagram
ಬೆಂಗಳೂರು: ಕಾಮಿಡಿ ಶೋನಲ್ಲಿ ವಿಭಿನ್ನ ಮ್ಯಾನಸರಿಸಂ ಮೂಲಕ ಜನಮನ್ನಣೆ ಗಳಿಸಿ, ಬಿಗ್‌ಬಾಸ್‌ ಕನ್ನಡ ಸೀಸನ್‌ ೧೦ರಲ್ಲಿ ಸ್ಪರ್ಧಿಸಿ ಫೇಮಸ್‌ ಆಗಿರುವ ತುಕಾಲಿ ಸಂತೋಷ್ ಅವರು ಅದ್ಯ ಗಿಚ್ಚಿಗಿಲಿ ಗಿಲಿ ಕಾಮಿಡಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.

ಅದಲ್ಲದೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ತುಕಾಲಿ ಅವರ  ‘ಮೂರನೇ ಕೃಷ್ಣಪ್ಪ’ ಸಿನಿಮಾ ಮೇ 24ರಂದು ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿರುವ ಅವರು, ಈಚೆಗೆ ಅದರ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಬಿಗ್‌ಬಾಸ್‌ನಿಂದ ಹೊರಬಂದಮೇಲೆ ರಿಲೀಸ್‌ ಆಗುತ್ತಿರುವ ಎರಡನೇ ಸಿನಿಮಾ ಇದು. ಈ ಸಿನಿಮಾಕ್ಕಾಗಿ ನನ್ನ ಭಾಷೆಯಲ್ಲಿ ಬದಲಾವಣೆ ಮಾಡಿಕೊಂಡೆ. ಇದುವರೆಗೂ ಕನ್ನಡ ಚಿತ್ರರಂಗದಲ್ಲಿ 22 ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದೇನೆ. ಆದರೆ ಮೊದಲ ಬಾರಿ ನನ್ನ ಕಟೌಟ್‌ ಅನ್ನು ನಿಲ್ಲಿಸಿರುವುದು ಇದೇ ಮೊದಲ ಬಾರಿ ಎಂದು ಖುಷಿ ವ್ಯಕ್ತಪಡಿಸಿದರು.

ಸದ್ಯ ತುಕಾಲಿ ಸಂತೋಷ್ ಅವರು ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಅಭಿನಯಿಸುತ್ತಿದ್ದಾರೆ. ಈ ಶೋನಲ್ಲಿ ಅವರ ಪತ್ನಿ ಮಾನಸಾ ಕೂಡ ಅಭಿನಯಿಸುತ್ತಿದ್ದಾರೆ.

ಅದಲ್ಲದೆ ತುಕಾಲಿ ಅವರಿಗೆ ಕಲರ್ಸ್‌ ಕನ್ನಡದ ಸೀರಿಯಲ್‌ನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್‌ ಮೂಡ್‌ನಲ್ಲಿ ‌ʼಗಿಲ್ಲಿʼ ನಟಿ ರಾಕುಲ್‌ ಪ್ರೀತ್