Select Your Language

Notifications

webdunia
webdunia
webdunia
webdunia

ನಟನೆ ಬಣ್ಣ ಮಾಸುವ ತನಕ ಅಷ್ಟೇ, ನಿವೇದಿತಾಗೆ ಬುದ್ಧಿ ಹೇಳಿದ ನೆಟ್ಟಿಗರು

Netizens

sampriya

ಬೆಂಗಳೂರು , ಶನಿವಾರ, 8 ಜೂನ್ 2024 (09:24 IST)
Photo By X
ಬೆಂಗಳೂರು:  ನಟ, ಗಾಯಕ ಚಂದನ್‌ ಶೆಟ್ಟಿ ಜತೆಗಿನ ದಾಂಪತ್ಯದಿಂದ ವಿಚ್ಚೇಧನ ಪಡೆಯುತ್ತಿರುವ ಸುದ್ದಿ ವೈರಲ್‌ ಬೆನಲ್ಲೇ ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಈ ದಿನ ಚಂದನ್‌ ಶೆಟ್ಟಿ ಮತ್ತು ನಾನು ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು  ಗೌರವಿಸಲು ಕೋರುತ್ತೇವೆ. ನಮ್ಮ ಸ್ನೇಹಿತರು ಮತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ.  ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಿವೇದಿತಾ ಗೌಡ ಅವರು ಬರೆದುಕೊಂಡಿದ್ದರೆ.

ಈ ಪೋಸ್ಟ್‌ಗೆ ನೆಟ್ಟಿಗರು ವಿಧ ವಿಧವಾಗಿ ಕಮೆಂಟ್‌ ಮಾಡಿದ್ದಾರೆ. ಒಬ್ಬರು ಪ್ರತಿಕ್ರಿಯಿಸಿ ನಟನೆಗಾಗಿ ದಾಂಪತ್ಯ ಹಾಳು ಮಾಡಿಕೊಳ್ಳಬೇಡಿ, ನಟನೆ ಬಣ್ಣ ಮಾಸುವ ತನಕ, ಪತಿ ಪತ್ನಿ ಸಂಬಂಧ ಜೀವನ ಇರುವ ತನಕ ಎಂದು ಬುದ್ಧಿ ಹೇಳಿದ್ದಾರೆ.

ಮತ್ತೊಬ್ಬರು ದುಡ್ಡಿನ ಪ್ರೀತಿ ದುಡ್ಡು ಇರೋ ತನಕ, ಬಡವನ ಪ್ರೀತಿ ಸಾಯೋ ತನಕ, ಒಳ್ಳೇದ್ ಆಗ್ಲಿ ಎಂದು ಬರೆದುಕೊಂಡಿದ್ದಾರೆ. ಈ ಬಾಳಿಗೆ ರಾಜ ರಾಣಿ ಬೇರೆ ಹೋಗಿದ್ದು ಯಾವ ಕರ್ಮಕ್ಕೆ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇನ್ನೂ ನಿವೇದಿತಾ ಅವರಿಂದ ವಿಚ್ಛೇದನ ಪಡೆದು ದೂರವಾಗುತ್ತಿರುವ ಬಗ್ಗೆ ನಟ ಚಂದನ್‌ ಶೆಟ್ಟಿ ಕೂಡ ಪೋಸ್ಟ್‌ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವಿ- ಚಂದು ದೂರಾ ದೂರಾ, ನಾಲ್ಕು ವರ್ಷದ ದಾಂಪತ್ಯ ಬ್ರೇಕ್‌ ಹಾಕಿದ ರಾಜಾರಾಣಿ ಜೋಡಿ