Select Your Language

Notifications

webdunia
webdunia
webdunia
webdunia

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಡಿವೈನ್‌ ಸ್ಟಾರ್‌ ರಿಷಬ್‌ ದಂಪತಿ ಭೇಟಿ

rishabh shetty

sampriya

ಬೆಂಗಳೂರು , ಶುಕ್ರವಾರ, 7 ಜೂನ್ 2024 (16:35 IST)
Photo By X
ಬೆಂಗಳೂರು: ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ಗೆ ಕೊಂಚ ಬಿಡುವು ಕೊಟ್ಟ ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಅವರು ಪತ್ನಿ ಜತೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇತ್ತೀಚೆಗೆ ರಿಷಬ್ ಫ್ಯಾಮಿಲಿ, ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈಗ ಗೋಕರ್ಣದ ಮಹಾಬಲೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದ ಜೊತೆ ನಟ ಕಾಲ ಕಳೆದಿದ್ದಾರೆ.

ಇನ್ನೂ ರಿಷಬ್ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ ಮಧ್ಯೆ, ಹೊಸಬರ ಸಿನಿಮಾಗಳಿಗೆ ಬೆಂಬಲಿಸುತಿದ್ದಾರೆ. ಅದಲ್ಲದೆ ಸಿನಿಮಾ ಟ್ರೇಲರ್‌ ಲಾಂಚ್‌, ಸಿನಿಮಾ ಮುಹೂರ್ತಕ್ಕೆ ಭಾಗವಹಿಸಿ ಶುಭಕೋರುತ್ತಿದ್ದಾರೆ.

ಅದಲ್ಲದೆ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಸಿನಿಮಾಗಳನ್ನು ತಯಾರಿಸುತ್ತಿದ್ದಾರೆ.  ಸದ್ಯ ಶಿವಮ್ಮ ಚಿತ್ರ, ಪ್ರಮೋದ್ ಶೆಟ್ಟಿ ನಟನೆಯ ‘ಲಾಫಿಂಗ್ ಬುದ್ಧ’ ಸೇರಿದಂತೆ ಹಲವು ಸಿನಿಮಾಗಳಿಗೆ ರಿಷಬ್ ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ ನಿಮ್ಮ ಅಸಂಬದ್ಧ ಕಲ್ಪನೆ ಭ್ರಮೆ ಅಷ್ಟೇ: ಉಪ್ಪಿ ಬಗ್ಗೆ ಚೇತನ್‌ ವ್ಯಂಗ್ಯ