Select Your Language

Notifications

webdunia
webdunia
webdunia
webdunia

ಅಂಬಿ-ವಿಷ್ಣು ಸ್ನೇಹಕ್ಕೆ ಮಸಿ ಬಳಿಯಬೇಡಿ: ಸುಮಲತಾ ಮನವಿ

ಅಂಬಿ-ವಿಷ್ಣು ಸ್ನೇಹಕ್ಕೆ ಮಸಿ ಬಳಿಯಬೇಡಿ: ಸುಮಲತಾ ಮನವಿ
ಬೆಂಗಳೂರು , ಮಂಗಳವಾರ, 30 ಜೂನ್ 2020 (09:57 IST)
ಬೆಂಗಳೂರು: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ವಿಷ್ಣುವರ್ಧನ್ ಸ್ಮಾರಕವನ್ನು ವಿನಾಕಾರಣ ಕೆದಕಿ ವಿವಾದವೆಬ್ಬಿಸುತ್ತಿರುವವರಿಗೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದರೂ ಹಲವರಿಗೆ ಸಮಾಧಾನವಾದಂತಿಲ್ಲ.


ವಿಷ್ಣು  ಸ್ಮಾರಕ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ನೀಲನಕ್ಷೆ ಸಮೇತ ಸುಮಲತಾ ಪ್ರತಿಕ್ರಿಯಿಸಿದ ಹೊರತಾಗಿಯೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಷ್ಣು-ಅಂಬರೀಶ್ ನಡುವಿನ ಸ್ನೇಹದ ವಿಚಾರವನ್ನು ಪ್ರಸ್ತಾಪಿಸಿ ವಿವಾದ ಮಾಡುವ ಪ್ರಯತ್ನ ಮಾಡಿದ್ದಾರೆ.

ಇದಕ್ಕೆ ಮತ್ತೆ ತಿರುಗೇಟು ನೀಡಿರುವ ಸುಮಲತಾ ವಿಷ್ಣುವರ್ಧನ್ ತೀರಿಕೊಂಡಾಗ ಅಂಬರೀಶ್ ಆಡಿದ ಮಾತುಗಳ ವಿಡಿಯೋ ತುಣುಕನ್ನು ಪ್ರಕಟಿಸಿ ವಿಷ್ಣು-ಅಂಬಿ ಸ್ನೇಹ ಎಂತಹದ್ದು ಎಂದು ತಿಳಿಯಬೇಕಾದರೆ ಈ ವಿಡಿಯೋ ನೋಡಿ. ನಿಜವಾದ ಸ್ನೇಹಕ್ಕೆ ಹುಟ್ಟು, ಸಾವು ಇಲ್ಲ. ಕೆಲವರು ಅನಗತ್ಯ ಕಾಮೆಂಟ್ ಗಳಿಂದ ಇವರಿಬ್ಬರ ಸ್ನೇಹವನ್ನು ಅಳೆಯುತ್ತಿರುವುದು ನೋಡಿದರೆ ದುಃಖವಾಗುತ್ತದೆ. ದಯವಿಟ್ಟು ಯಾರೂ ವಿಷ್ಣು-ಅಂಬಿ ಸ್ನೇಹಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಬೇಡಿ ಎಂದು ಸುಮಲತಾ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಆಪ್ ನಿಷೇಧ ಬಗ್ಗೆ ಸ್ಯಾಂಡಲ್ ವುಡ್ ತಾರೆಯರ ಪ್ರತಿಕ್ರಿಯೆ ಏನು ಗೊತ್ತಾ?