Select Your Language

Notifications

webdunia
webdunia
webdunia
webdunia

ಗೀತಾ ವಿಷ್ಣು ಪ್ರಕರಣದಲ್ಲಿ ನನ್ನ ಮಗನ ಹೆಸರು ಥಳುಕು ಹಾಕಿದ್ದು ಬೇಸರವಾಗಿದೆ: ಸುಮಲತಾ ಅಂಬರೀಷ್

ಗೀತಾ ವಿಷ್ಣು ಪ್ರಕರಣದಲ್ಲಿ ನನ್ನ ಮಗನ ಹೆಸರು ಥಳುಕು ಹಾಕಿದ್ದು ಬೇಸರವಾಗಿದೆ: ಸುಮಲತಾ ಅಂಬರೀಷ್
ಬೆಂಗಳೂರು , ಮಂಗಳವಾರ, 3 ಅಕ್ಟೋಬರ್ 2017 (12:54 IST)
ಗೀತಾ ವಿಷ್ಣು ಅಪಘಾತ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನ ಥಳುಕು ಹಾಕಿದ್ದು ಬೇಸರ ತಂದಿದೆ. ನನ್ನ ಮಗನ ಜೊತೆ ಇತರೆ ನಟರ ಹೆಸರೂ ಕೇಳಿ ಬಂದಿತ್ತು. ಯಾವುದೇ ಸುದ್ದಿ ಮಾಡುವ ಮುನ್ನ ಖಚಿತಪಡಿಸಿಕೊಳ್ಳಬೇಕು. ಊಹೆ ಮಾಡಿಕೊಂಡು ಸುದ್ದಿ ಮಾಡುವುದು ಸರಿಯಲ್ಲ ಎಂದು ಸುಮಲತಾ ಅಂಬರೀಷ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪುತ್ರ ಅಭಿಷೇಕ್ ಅವರ 25ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಬರೀಷ್ ದಂಪತಿ ಮಾಧ್ಯಮದವರ ಜೊತೆ ಮಾತನಾಡಿದರು. ಪ್ರಜ್ವಲ್ ಮತ್ತು ದಿಗಂತ್ ಬೆಳೆಯುತ್ತಿರುವ ಹುಡುಗರು. ಅವರನ್ನು ಬೆಳೆಯಲು ಬಿಡಿ. ಅವರಿಬ್ಬರೂ ಫೋನ್ ಮಾಡಿ ಮಾತನಾಡಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿರುವುದರಿಂದ ಹೆಚ್ಚೇನೂ ಮಾತನಾಡುವುದು ಬೇಡ ಎಂದು ಅಂಬರೀಷ್ ಹೇಳಿದ್ದಾರೆ.

ಇತ್ತ, ಅಂಬರೀಷ್ ಪುತ್ರ ಅಭಿಷೇಕ್ ಅವರ 25ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮನೆ ಮುಂದೆ ಸಂಭ್ರಮ ಮಾಡಿದೆ. ಕಟೌಟ್`ಯತೆ ಇದೆ ಎನ್ನಲಾಗುತ್ತಿದೆ. ಸಿನಿಮಾ ಎಂಟ್ರಿಗೆ ತಯಾರಿಯಲ್ಲಿ ತೊಡಗಿರುವ ಅಭಿಷೇಕ್ ಸಹ ಬ್ಯಾಂಕಾಕ್`ನಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದು ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೀತಾ ವಿಷ್ಣು ಪ್ರಕರಣದಲ್ಲಿ ಸಿಲುಕಿಕೊಂಡ ಯುವ ನಟರಿಗೆ ನಟ ಜಗ್ಗೇಶ್ ಬೆಂಬಲ