Webdunia - Bharat's app for daily news and videos

Install App

Srirasthu Shubhamasthu: ಕನ್ನಡ ಸೀರಿಯಲ್ ಇತಿಹಾಸದಲ್ಲೇ ಕರೆಕ್ಟ್ ಆಗಿ ಡೆಲಿವರಿ ಆದ ಮೊದಲ ಮಗು ಇದೇ ಅಂತೆ

Krishnaveni K
ಗುರುವಾರ, 13 ಮಾರ್ಚ್ 2025 (16:05 IST)
ಬೆಂಗಳೂರು: ಕನ್ನಡ ಸೀರಿಯಲ್ ಇತಿಹಾಸದಲ್ಲೇ ಕರೆಕ್ಟ್ ಆಗಿ ಡೆಲಿವರಿ ಆದ ಮೊದಲ ಮಗು ಎಂದರೆ ಇದುವೇ ಎಂದು ಈಗ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ತುಳಸಿ ಡೆಲಿವರಿ ವಿಚಾರ ಟ್ರೋಲ್ ಆಗುತ್ತಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿ ಹೀರೋಯಿನ್. ತುಳಸಿ ಎನ್ನುವ ಮಧ್ಯವಯಸ್ಕ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ. ಅವರೀಗ ಗರ್ಭಿಣಿಯಾಗಿ ಡೆಲಿವರಿಗಾಗಿ ಆಸ್ಪತ್ರೆಗೆ ಬಂದಿರುತ್ತಾರೆ.

ಎಂದಿನಂತೆ ಸಾವು-ಬದುಕಿನ ನಡುವಿನ ಹೋರಾಟ ಅದೆಲ್ಲಾ ಮಾಮೂಲಾಗಿಯೇ ಇಲ್ಲೂ ಇದೆ. ಆದರೆ ಯಾವುದೇ ಅನಾಹುತವಾಗದೇ ತುಳಸಿ ಮಗುವಿನಗೆ ಜನ್ಮ ನೀಡುತ್ತಾಳೆ. ಈ ಪ್ರೋಮೋ ನೋಡಿದ ಪ್ರೇಕ್ಷಕರು ಈಗ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಬಹುಶಃ ಕನ್ನಡ ಸೀರಿಯಲ್ ಇತಿಹಾಸದಲ್ಲೇ ಯಶಸ್ವಿಯಾಗಿ ಡೆಲಿವರಿ ಆದ ಮೊದಲ ಮಗು ಇದೇ ಆಗಿರಬೇಕು ಎಂದು ಹಲವರು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಹೊಟ್ಟೆಯೇ ಇಲ್ಲದೇ ಇದ್ದರೂ ತುಳಸಿಗೆ ಡೆಲಿವರಿ ಹೇಗಾಯ್ತು ಎಂದು ಕಾಲೆಳೆದಿದ್ದಾರೆ. ಸಾಮಾನ್ಯವಾಗಿ ಧಾರವಾಹಿಗಳಲ್ಲಿ ಹೀರೋಯಿನ್ ಗರ್ಭಿಣಿ ಆದರೂ ಒಂದೋ ಅಬಾರ್ಷನ್ ಆಗಿಬಿಡುತ್ತದೆ, ಇಲ್ಲವೇ ವಿಲನ್ ಗಳ ಕುತಂತ್ರದಿಂದ ಮಗು ಸಾಯುತ್ತದೆ. ಆದರೆ ಇಲ್ಲಿ ಮಗು ಬದುಕಿರುವುದನ್ನು ನೋಡಿ ವೀಕ್ಷಕರು ಸಖತ್ ಟ್ರೋಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಮುಂದಿನ ಸುದ್ದಿ
Show comments