Select Your Language

Notifications

webdunia
webdunia
webdunia
webdunia

ಅಪ್ಪನ ಪಕ್ಕದಲ್ಲೇ ಮಗನ ಪುತ್ಥಳಿ

ಅಪ್ಪನ ಪಕ್ಕದಲ್ಲೇ ಮಗನ ಪುತ್ಥಳಿ
ಬೆಂಗಳೂರು , ಬುಧವಾರ, 24 ನವೆಂಬರ್ 2021 (09:08 IST)
ಬೆಂಗಳೂರು : ನಟ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ.
ಅದನ್ನು ನಿರ್ಮಿಸುವ ಜವಾಬ್ದಾರಿಯನ್ನು ಬನಶಂಕರಿ ನಿವಾಸಿ ಮತ್ತು ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ ವಹಿಸಿಕೊಂಡಿದ್ದಾರೆ. ಅದನ್ನು ವೀಕ್ಷಿಸಲು ತೆರಳಿದ್ದ ರಾಘವೇಂದ್ರ ರಾಜ್ಕುಮಾರ್ ನಂತರ, ಮಾಧ್ಯಮದವರೊಂದಿಗೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪುತ್ಥಳಿಯ ಅನಾವರಣ ಯಾವಾಗ ಎಂಬ ಪ್ರಶ್ನೆಗೆ, ಎಷ್ಟು ಬೇಗ ಆಗುತ್ತದೆ ಎನ್ನುವುದು ದೊಡ್ಡದಲ್ಲ, ಎಷ್ಟು ಚೆನ್ನಾಗಿ ಆಗುತ್ತದೆ ಎನ್ನುವುದು ಮುಖ್ಯ ಎಂದಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿಲ್ಲ. ಕಾರ್ಯಕ್ರಮಕ್ಕೆ ಕುಟುಂಬ, ಅಧಿಕಾರಿಗಳು, ಮಂತ್ರಿಗಳು ಹಾಗೂ ಅದಕ್ಕೆ ಸಂಬಂಧಿಸಿದವರು ಎಲ್ಲರು ಸಿಗಬೇಕು. ಎಲ್ಲಾ ತಯಾರಿಯ ನಂತರ ಅನಾವರಣ ನಡೆಯಲಿದೆ ಎಂದಿದ್ದಾರೆ. ಪುತ್ಥಳಿಯನ್ನು ಡಾ.ರಾಜ್ಕುಮಾರ್ ಅವರ ಸಮಾಧಿಯ ಪಕ್ಕದಲ್ಲೇ ಸ್ಥಾಪಿಸಲಾಗುವುದು ಎಂದು ರಾಘವೇಂದ್ರ ರಾಜ್ಕುಮಾರ್ ಇದೇ ವೇಳೆ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಜೀವಂತ