Select Your Language

Notifications

webdunia
webdunia
webdunia
webdunia

ನನ್ನ ಹಾಡನ್ನು ನೀವು ಮತ್ತೆ ಹಾಡಬೇಕು! ಎಸ್ ಪಿಬಿಗೆ ಶಿವರಾಜ್ ಕುಮಾರ್ ಭಾವುಕ ಸಂದೇಶ

ಎಸ್ ಪಿ ಬಾಲಸುಬ್ರಮಣ್ಯಂ
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (11:18 IST)
ಬೆಂಗಳೂರು: ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಚೇತರಿಕೆಗಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಪ್ರಾರ್ಥನೆ ಮಾಡಿದ್ದಾರೆ.


ಎಸ್ ಪಿ ಬಗ್ಗೆ ವಿಡಿಯೋ ಮೂಲಕ ಭಾವುಕ ಸಂದೇಶ ನೀಡಿರುವ ಶಿವಣ್ಣ ನೀವು ಮತ್ತೆ ನನ್ನ ಮತ್ತು ಎಲ್ಲರ ಸಿನಿಮಾಗಳಲ್ಲಿ ಹಾಡುವಂತಾಗಬೇಕು ಎಂದು ಹಾರೈಸಿದ್ದಾರೆ.

‘ನನ್ನ ಮೊದಲ ಸಿನಿಮಾದಿಂದ ಇಂದಿನವರೆಗೆ ಅನೇಕ ಸಿನಿಮಾಗಳಿಗೆ ನೀವು ಧ್ವನಿ ನೀಡಿದ್ದೀರಿ. ಅಂದಿನಿಂದಲೂ ನಾನು ನಿಮ್ಮ ದೊಡ್ಡ ಅಭಿಮಾನಿ. ನೀವು ಬೇಗ ಗುಣಮುಖರಾಗಿ ಎಂದು ಹಾರೈಸುವೆ. ನನಗೆ ಗೊತ್ತು ನೀವು ಮತ್ತೆ ಮರಳುತ್ತೀರಿ ಮತ್ತು ನನ್ನ ಹಾಗೂ ಎಲ್ಲರ ಸಿನಿಮಾಗಳಿಗೆ ಹಾಡುತ್ತೀರಿ. ನನ್ನ ಮುಂದಿನ ಸಿನಿಮಾಗೆ ನೀವು ಹಾಡುವುದನ್ನು ಕಾಯುತ್ತಿದ್ದೇನೆ’ ಎಂದು ಶಿವಣ್ಣ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಾನಿ ಅಭಿನಯದ 25ನೇ ಚಿತ್ರ ‘ವಿ’ ಅಮೇಜಾನ್ ಪ್ರೈಂನಲ್ಲಿ ರಿಲೀಸ್