Webdunia - Bharat's app for daily news and videos

Install App

ಸಾರ್ವಜನಿಕರಲ್ಲಿ ವಿನಂತಿ: ಆರಕ್ಷಕರಿಗೆ ಅರ್ಪಿಸಿದಕ್ಕಿದೆ ಬಲವಾದ ಕಾರಣ!

Webdunia
ಶುಕ್ರವಾರ, 21 ಜೂನ್ 2019 (15:01 IST)
ಕೃಪಾ ಸಾಗರ್ ನಿರ್ದೇಶನದ ಸಾರ್ವಜನಿಕರಲ್ಲಿ  ವಿನಂತಿ ಚಿತ್ರ ಭರಪೂರ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ವಾರ ತೆರೆ ಕಾಣಲು ಸಜ್ಜಾಗಿದೆ. ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿರೋ ಈ ಚಿತ್ರ ವಿಶಿಷ್ಟವಾದ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ ಅನ್ನೋದೂ ಈಗಾಗಲೇ ಜಾಹೀರಾಗಿದೆ. ಈ ಚಿತ್ರವನ್ನು ಸಾರ್ವಜನಿಕರ ರಕ್ಷಣೆಗೆ ಸದಾ ಟೊಂಕ ಕಟ್ಟಿ ನಿಂತಿರುವ ಆರಕ್ಷಕರಿಗೆ ಅರ್ಪಿಸುವ ಮೂಲಕವೂ ಚಿತ್ರತಂಡ ಗಮನ ಸೆಳೆದಿದೆ.
ನಮ್ಮ ನಡುವೆ ಚಿತ್ರವಿಚಿತ್ರವಾದ ಕ್ರೈಂಗಳು ನಡೆಯುತ್ತಿರುತ್ತವೆ. ಆದರೂ ಜನಸಾಮಾನ್ಯರ ಕಣ್ಣಲ್ಲಿ ಕೆಲವೇ ಕೆಲ ಪ್ರಕರಣಗಳು ಮಾತ್ರವೇ ಅಪರಾಧ ಎಂಬಂಥಾ ಛಾಯೆಯಿದೆ. ಈ ಕಾರಣದಿಂದಲೇ ಬೆನ್ನ ಹಿಂದೆ ನಡೆಯ ಬಹುದಾದ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸೋದೂ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಈ ಚಿತ್ರದಲ್ಲಿನ ಅಂಶಗಳು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಸದಾ ಅಲರ್ಟ್ ಆಗಿಡುವ ಮೂಲಕ ಪೊಲೀಸರ ಭಾರವನ್ನು ಕಡಿಮೆ ಮಾಡುವಂತಿದೆಯಂತೆ.
ಈ ಚಿತ್ರದಲ್ಲಿಯೂ ಪೊಲೀಸರನ್ನು ಹೀರೋಗಳಾಗಿಯೇ ಬಿಂಬಿಸಲಾಗಿದೆ. ಇಡೀ ಕಥೆಯಲ್ಲಿ ಪೊಲೀಸ್ ಪಾತ್ರಗಳಿಗೊಂದು ಪ್ರಾಧಾನ್ಯತೆ ಇದೆ. ಈ ಕಾರಣದಿಂದಲೇ ಈ ಚಿತ್ರವನ್ನು ಪೊಲೀಸರಿಗೆ ಅರ್ಪಿಸಲಾಗಿದೆ ಎಂಬ ಮಾಹಿತಿ ಚಿತ್ರತಂಡದ ಕಡೆಯಿಂದ ಹೊರ ಬಿದ್ದಿದೆ. ಆದರೆ ಅದಕ್ಕೆ ಬೇರೊಂದು ಕಾರಣವೂ ಇದೆ. ಅದೇನೆಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆ ಗುಟ್ಟೂ ಸೇರಿದಂತೆ ಒಂದಿಡೀ ಚಿತ್ರವನ್ನು ಆಸ್ವಾದಿಸೋ ಕ್ಷಣಗಳು ಹತ್ತಿರಾಗುತ್ತಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments