Select Your Language

Notifications

webdunia
webdunia
webdunia
webdunia

ಸಂಕಷ್ಟದಲ್ಲಿ ಒಗ್ಗಟ್ಟಾದ ಸ್ಯಾಂಡಲ್ ವುಡ್ ತಾರೆಯರು

ಸಂಕಷ್ಟದಲ್ಲಿ ಒಗ್ಗಟ್ಟಾದ ಸ್ಯಾಂಡಲ್ ವುಡ್ ತಾರೆಯರು
ಬೆಂಗಳೂರು , ಭಾನುವಾರ, 13 ಜೂನ್ 2021 (09:04 IST)
ಬೆಂಗಳೂರು: ಸಿನಿಮಾ ವಿಚಾರದಲ್ಲಿ ಎಷ್ಟೇ ಪೈಪೋಟಿಯಿರಲಿ, ಆದರೆ ಕೊರೋನಾದಿಂದಾಗಿ ಜನರು ಸಂಕಷ್ಟದಲ್ಲಿದ್ದಾಗ ಸ್ಯಾಂಡಲ್ ವುಡ್ ತಾರೆಯರು ಪರಸ್ಪರ ಒಗ್ಗಟ್ಟಾಗಿ ಕೈ ಜೋಡಿಸಿದ್ದು ಶ್ಲಾಘನೀಯ.


ಲಾಕ್ ಡೌನ್ ಘೋಷಣೆಯಾದಾಗ ಎಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲದೇ ಸಂಕಷ್ಟಕ್ಕೀಡಾದರು. ಇಷ್ಟು ದಿನ ತಮ್ಮನ್ನು ಮೆರೆಸುತ್ತಿದ್ದ ಅಭಿಮಾನಿಗಳು ಸಂಕಷ್ಟದಲ್ಲಿದ್ದಾರೆಂದು ಅರಿವಾದಾಗ ನಟ-ನಟಿಯರು ಆಹಾರ, ರೇಷನ್ ಕಿಟ್ ವಿತರಿಸಲು ಮುಂದಾದರು.

ರಿಯಲ್ ಸ್ಟಾರ್ ಉಪೇಂದ್ರ ಕಿಟ್ ನೀಡಲು ಮುಂದಾದಾಗ ಸಾಕಷ್ಟು ಸೆಲೆಬ್ರಿಟಿಗಳು ಅವರಿಗೆ ಆರ್ಥಿಕವಾಗಿ ನೆರವು ನೀಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳಿಗೆ ನೆರವಾಗಿ ಎಂದು ಕರೆ ನೀಡಿದ್ದಕ್ಕೆ ಸಾಕಷ್ಟು ಕಲಾವಿದರು ಪ್ರಾಣಿಗಳ ದತ್ತು ತೆಗೆದುಕೊಳ್ಳುವ ಅಭಿಯಾನಕ್ಕೆ ಕೈ ಜೋಡಿಸಿದರು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಂದಿಗೆ ಸ್ವಂತ ಖಾತೆಯಿಂದ ತಲಾ 5 ಸಾವಿರ ರೂ. ನೀಡಿ ಹೃದಯವಂತಿಕೆ ಮೆರೆದರು. ಕಿಚ್ಚ ಸುದೀಪ್ ಆಹಾರ ಕಿಟ್ ಗಳನ್ನು ವಿತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾರ್ಮಿಕರ ನೆರವಿಗೆ ಧನ ಸಹಾಯ ಮಾಡಿದರು. ತಮ್ಮನ್ನು ಸದಾ ಮೆರೆಸುವ ಅಭಿಮಾನಿಗಳಿಗೆ ನೆರವಾಗಲು ಕಲಾವಿದರು ಒಟ್ಟಾಗಿದ್ದು ನಿಜಕ್ಕೂ ಶ್ಲಾಘನೀಯ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕರಲ್ಲ, ದುಬಾರಿ ಸಿನಿಮಾವೇ ಸದ್ಯಕ್ಕಿಲ್ಲ!: ನಿರ್ಮಾಪಕರ ಸ್ಪಷ್ಟನೆ