Select Your Language

Notifications

webdunia
webdunia
webdunia
webdunia

ಸರ್ಕಾರದ ಕಡೆಗೆ ಚಿತ್ರರಂಗದ ನೋಟ

ಸರ್ಕಾರದ ಕಡೆಗೆ ಚಿತ್ರರಂಗದ ನೋಟ
ಬೆಂಗಳೂರು , ಮಂಗಳವಾರ, 14 ಸೆಪ್ಟಂಬರ್ 2021 (11:34 IST)
ಬೆಂಗಳೂರು: ಗಣೇಶ ಹಬ್ಬವೂ ಮುಗಿದಿದೆ. ಕೊರೋನಾ ಆತಂಕವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇನ್ನಾದರೂ  ನಮ್ಮ ಭಾಗ್ಯದ ಬಾಗಿಲು ತೆರೆಯುತ್ತಾ ಎಂದು ಚಿತ್ರರಂಗ ಸರ್ಕಾರದತ್ತ ನೋಟ ನೆಟ್ಟಿದೆ.


ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ವಾರ ತೀರ್ಮಾನ ತೆಗೆದುಕೊಳ್ಳುವ ಸಾಧ‍್ಯತೆಯಿದೆ. ಈಗಾಗಲೇ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ.

‘ರಾಬರ್ಟ್’, ‘ಪೊಗರು, ‘ಯುವರತ್ನ’ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹೀಗಾಗಿ ಹಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಕಾದು ಕುಳಿತಿವೆ. ಒಂದು ವೇಳೆ ರಾಜ್ಯ ಸರ್ಕಾರ ಈ ವಾರ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡಿದರೆ ಮತ್ತೆ ಸಿನಿಮಾ ಜಾತ್ರೆ ಶುರುವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ ಬುಷ್ ಸೇರಿದ ಮತ್ತೊಬ್ಬ ಸ್ಟಾರ್ ನಟ