Select Your Language

Notifications

webdunia
webdunia
webdunia
webdunia

ನನ್ನ ಪರಿಸ್ಥಿತಿ ನಿಮಗೆ ಬಾರದಿರಲಿ: ಕಣ್ಣೀರು ಹಾಕಿದ ಸಮಂತಾ

ನನ್ನ ಪರಿಸ್ಥಿತಿ ನಿಮಗೆ ಬಾರದಿರಲಿ: ಕಣ್ಣೀರು ಹಾಕಿದ ಸಮಂತಾ
ಹೈದರಾಬಾದ್ , ಮಂಗಳವಾರ, 10 ಜನವರಿ 2023 (09:12 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಋತು ಪ್ರಭು ಕಮ್ ಬ್ಯಾಕ್ ಮಾಡಿದ್ದಾರೆ. ಮಿಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಈಗ ಚಿಕಿತ್ಸೆ ಮುಗಿಸಿಕೊಂಡು ಭಾರತಕ್ಕೆ ಮರಳಿದ್ದಾರೆ.

ತಮ್ಮ ಮುಂಬರುವ ಸಿನಿಮಾ ಶಾಕುಂತಲಾ ಟ್ರೈಲರ್ ಲಾಂಚ್ ನಲ್ಲಿ ಸಮಂತಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಮಂತಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು.

ಸಮಂತಾ ಟ್ರೈಲರ್ ಲಾಂಚ್ ನ ಫೋಟೋಗಳನ್ನು ಕೆಲವರು ಶೇರ್ ಮಾಡಿದ್ದು, ನಟಿಗೆ ಈಗ ಮೊದಲಿನ ಚಾರ್ಮ್ ಇಲ್ಲ ಎಂದು ಬರೆದಿದ್ದರು. ಇದು ಸಮಂತಾಗೆ ತಲುಪಿದ್ದು, ಈ ಕಾಮೆಂಟ್ ಗಳನ್ನು ಟ್ಯಾಗ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ‘ನಾನು ಅನುಭವಿಸಿದ ಹಾಗೆ ತಿಂಗಳಾನುಗಟ್ಟಲೆ ಚಿಕಿತ್ಸೆ, ಔಷಧಿ ತೆಗೆದುಕೊಳ್ಳುವ ಸ್ಥಿತಿ ನಿಮಗೆ ಬಾರದಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಕಳೆ ಹೆಚ್ಚಿಸಲು ನನ್ನ ಪ್ರೀತಿ ನಿಮ್ಮ ಮೇಲಿರಲಿದೆ’ ಎಂದು ಕೂಲ್ ಆಗಿಯೇ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ 19 ನಂತೇ ಕಿಚ್ಚ 46 ನೇ ಸಿನಿಮಾಗೆ ಕಾಯುತ್ತಿರುವ ಫ್ಯಾನ್ಸ್