Select Your Language

Notifications

webdunia
webdunia
webdunia
webdunia

ಈ ಜ್ಯೋತಿಷಿ ಮಾತು ಕೇಳಿ ರಕ್ಷಿತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ್ರಾ ರಶ್ಮಿಕಾ?!

ಈ ಜ್ಯೋತಿಷಿ ಮಾತು ಕೇಳಿ ರಕ್ಷಿತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ್ರಾ ರಶ್ಮಿಕಾ?!
ಹೈದರಾಬಾದ್ , ಶನಿವಾರ, 7 ಜನವರಿ 2023 (08:50 IST)
WD
ಹೈದರಾಬಾದ್: ಕಿರಿಕ್ ಪಾರ್ಟಿಯಲ್ಲಿ ಜೋಡಿಯಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬಳಿಕ ಪ್ರೀತಿಸಿ ಮದುವೆಯಾಗುವ ಹಂತಕ್ಕೆ ಬಂದಿದ್ದರು. ಎಂಗೇಜ್ ಮೆಂಟ್ ಆದ ಬಳಿಕ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

ಈ ಕಾರಣಕ್ಕೆ ರಶ್ಮಿಕಾ ಇಂದಿಗೂ ಟ್ರೋಲ್ ಆಗುತ್ತಲೇ ಇದ್ದಾರೆ. ತೆಲುಗಿನಲ್ಲಿ ಕ್ಲಿಕ್ ಆದ ಮೇಲೆ ರಕ್ಷಿತ್ ಗೆ ಕೈ ಕೊಟ್ಟರು ಎಂಬಿತ್ಯಾದಿ ಟೀಕೆಗಳು ಬರುತ್ತಲೇ ಇವೆ.

ಈ ನಡುವೆ ಜ್ಯೋತಿಷಿ ವೇಣು ಸ್ವಾಮಿ ಎಂಬವರು ರಶ್ಮಿಕಾ ಮತ್ತು ರಕ್ಷಿತ್ ಜಾತಕ ನೋಡಿ ಹೇಳಿದ ಭವಿಷ್ಯದಿಂದಲೇ ಇಬ್ಬರ ಸಂಬಂಧ ಮುರಿದು ಬಿತ್ತು ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಟಾಲಿವುಡ್ ನ ಖ್ಯಾತ ನಟರ ಭವಿಷ್ಯ ಹೇಳುವ ವೇಣು ಸ್ವಾಮಿ ಈ ಮೊದಲೇ ರಶ್ಮಿಕಾ ಮತ್ತು ರಕ್ಷಿತ್ ಜಾತಕ ನೋಡಿ ಹೊಂದಾಣಿಕೆಯಾಗಲ್ಲ. ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡರೆ ರಶ್ಮಿಕಾ ಸಿನಿಮಾದಲ್ಲಿ ದೊಡ್ಡ ಹೀರೋಯಿನ್ ಆಗ್ತಾರೆ ಎಂದು ಭವಿಷ್ಯ ಹೇಳಿದ್ದರಂತೆ. ಅದೇ ಕಾರಣಕ್ಕೆ ರಶ್ಮಿಕಾ ಬ್ರೇಕಪ್ ಮಾಡಿಕೊಂಡರು ಎಂಬ ಸುದ್ದಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿರುದ್ಧ್ ಜತ್ಕಾರ್ ಗೆ ಸಿಕ್ಕ ಹೊಸ ನಾಯಕಿ ಯಾರು ಗೊತ್ತೇ?