Select Your Language

Notifications

webdunia
webdunia
webdunia
webdunia

ವಿವಾದಕ್ಕೆ ಕ್ಷಮೆ ಯಾಚಿಸಿದ ನಟಿ ಸಾಯಿ ಪಲ್ಲವಿ

ವಿವಾದಕ್ಕೆ ಕ್ಷಮೆ ಯಾಚಿಸಿದ ನಟಿ ಸಾಯಿ ಪಲ್ಲವಿ
ಹೈದರಾಬಾದ್ , ಭಾನುವಾರ, 19 ಜೂನ್ 2022 (08:00 IST)
ಹೈದರಾಬಾದ್: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋ ಸಾಗಣಿಕೆ ಹೆಸರಲ್ಲಿ ನಡೆದ ಹತ್ಯೆ ಎರಡೂ ಒಂದೇ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ನಟಿ ಸಾಯಿ ಪಲ್ಲವಿ ಈಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಸಾಯಿ ಪಲ್ಲವಿ ಹೇಳಿಕೆ ವಿರುದ್ಧ ಹೈದರಾಬಾದ್ ನಲ್ಲಿ ದೂರು ಕೂಡಾ ದಾಖಲಾಗಿತ್ತು. ವಿವಾದದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.

ಯಾವುದೇ ಧರ್ಮವನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಧರ್ಮದ ಹೆಸರಿನಲ್ಲಿ ನೋವು ಮಾಡುವುದು ತಪ್ಪು ಎಂಬರ್ಥದಲ್ಲಿ ಆ ಹೇಳಿಕೆ ನೀಡಿದ್ದೆ. ಒಬ್ಬ ವೈದ್ಯಕೀಯ ಪದವೀಧರೆಯಾಗಿ ನಾನು ಎಲ್ಲಕ್ಕಿಂತ ಮನುಷ್ಯ ಜೀವ, ಜೀವನ ದೊಡ್ಡದು ಎಂದು ನಂಬಿದ್ದೇನೆ. ಹಾಗಿದ್ದರೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾದಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮನೆ ಪ್ರವೇಶಿಸಿದ ಚಂದನ್-ಕವಿತಾ ಗೌಡ ದಂಪತಿ