Select Your Language

Notifications

webdunia
webdunia
webdunia
webdunia

ನಿರ್ಮಾಪಕರಾಗುತ್ತಿದ್ದಾರೆ ನಟ ಸಾಧುಕೋಕಿಲ

ನಿರ್ಮಾಪಕರಾಗುತ್ತಿದ್ದಾರೆ ನಟ ಸಾಧುಕೋಕಿಲ
ಬೆಂಗಳೂರು , ಶುಕ್ರವಾರ, 5 ಮಾರ್ಚ್ 2021 (10:03 IST)
ಬೆಂಗಳೂರು: ಇದುವರೆಗೆ ನಟ ಸಾಧುಕೋಕಿಲ ಅವರನ್ನು ಸಂಗೀತ ನಿರ್ದೇಶಕ, ನಿರ್ದೇಶಕರಾಗಿ ನೋಡಿರುತ್ತೀರಿ. ಆದರೆ ಈಗ ಸಾಧು ಮಹಾರಾಜ್ ನಿರ್ಮಾಪಕರಾಗುತ್ತಿದ್ದಾರೆ.


ಅದೂ ಕಿರುತೆರೆಯ ಧಾರವಾಹಿಯೊಂದಕ್ಕೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಯೊಂದನ್ನು ಸಾಧು ತಮ್ಮ ಸಂಸ್ಥೆ ‘ಸುರ’ ಬ್ಯಾನರ್ ನಲ್ಲಿ ನಿರ್ಮಿಸಲಿದ್ದಾರೆ. ಈ ಧಾರವಾಹಿ ‘ಗೌರಿಪುರದ ಗಯ್ಯಾಳಿಗಳು’ ಎಂಬ ಟೈಟಲ್ ನೊಂದಿಗೆ ಬರಲಿದೆ.

ಈ ಧಾರವಾಹಿ ಕೊಂಚ ಕಾಮಿಡಿ, ಕೊಂಚ ಯಶಸ್ಸಿನ ಕತೆ ಎರಡರ ಸಮ್ಮಿಲಿನವಾಗಲಿದೆ ಎಂದು ಸಾಧು ಹೇಳಿದ್ದಾರೆ. ವಿಶೇಷವೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡಾ ತಮ್ಮ ಬ್ಯಾನರ್ ನಲ್ಲಿ ‘ನೇತ್ರಾವತಿ’ ಎನ್ನುವ ಭಕ್ತಿಪ್ರಧಾನ ಧಾರವಾಹಿಯೊಂದನ್ನು ಉದಯ ಟಿವಿಗಾಗಿ ನಿರ್ಮಿಸುತ್ತಿದ್ದಾರೆ. ಇದೀಗ ಸಾಧು ಕೋಕಿಲಾ ಕೂಡಾ ಕಿರುತೆರೆಗೆ ವಿಶಿಷ್ಟ ಕಥಾನಕದ ಧಾರವಾಹಿಯೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್-ಕ್ರಿಶ್ ಚಿತ್ರದ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?