Select Your Language

Notifications

webdunia
webdunia
webdunia
webdunia

ನೀ ಎನಗಿದ್ದರೆ ನಾ ನಿನಗೆ! ಕೆಜಿಎಫ್ ಅಭಿಮಾನಿಗಳಿಗೆ ಆರ್ ಆರ್ ಆರ್ ಅಭಿಮಾನಿಗಳ ಎಚ್ಚರಿಕೆ

ನೀ ಎನಗಿದ್ದರೆ ನಾ ನಿನಗೆ! ಕೆಜಿಎಫ್ ಅಭಿಮಾನಿಗಳಿಗೆ ಆರ್ ಆರ್ ಆರ್ ಅಭಿಮಾನಿಗಳ ಎಚ್ಚರಿಕೆ
ಬೆಂಗಳೂರು , ಶುಕ್ರವಾರ, 25 ಮಾರ್ಚ್ 2022 (09:00 IST)
ಬೆಂಗಳೂರು: ಕನ್ನಡ ಅವತರಣಿಕೆಯ ಆರ್ ಆರ್ ಆರ್ ಸಿನಿಮಾ ಕರ್ನಾಟಕದಲ್ಲಿ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿಲ್ಲ ಎಂಬ ಆಕ್ರೋಶದಿಂದ ಇಲ್ಲಿನ ಅಭಿಮಾನಗಳು ತ್ರಿಬಲ್ ಆರ್ ಸಿನಿಮಾ ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು. ಆದರೆ ಇದಕ್ಕೆ ಈಗ ತ್ರಿಬಲ್ ಆರ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೆಜಿಎಫ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಬೇಕು. ನೀವು ಆರ್ ಆರ್ ಆರ್ ಬಹಿಷ್ಕರಿಸಿದರೆ ನಾವೂ ಅದೇ ಹಾದಿ ಹಿಡಿಯಬೇಕಾಗುತ್ತದೆ ಎಂದು ಕೆಲವು ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ ಆರ್ ಆರ್ ಆರ್ ಸಿನಿಮಾಗಾಗಿ ಕನ್ನಡ ಸಿನಿಮಾವನ್ನು ತೆಗೆಯಲಾಗುತ್ತಿದೆ ಎಂಬ ಆಕ್ರೋಶವೂ ಇದೆ. ಇದೆಲ್ಲಾ ಕಾರಣಕ್ಕೆ ಇದೀಗ ಆರ್ ಆರ್ ಆರ್ ಅಭಿಮಾನಿಗಳೂ ತೊಡೆ ತಟ್ಟಿ ನಿಂತಿರುವುದು ಹೊಸ ತಲೆನೋವು ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಸಿಡಿಸಿ ಆರ್ ಆರ್ ಆರ್ ಬರಮಾಡಿಕೊಂಡ ಅಭಿಮಾನಿಗಳು