Select Your Language

Notifications

webdunia
webdunia
webdunia
webdunia

ಪಂಚೆ ಉಟ್ಟುಕೊಂಡು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ರಾಕಿ ಭಾಯಿ ಯಶ್ ಕೊನೆಗೆ ಕಾಣಿಸಿಕೊಂಡಿದ್ದು ಇಲ್ಲಿ (Video)

Yash

Krishnaveni K

ಮಂಗಳೂರು , ಮಂಗಳವಾರ, 6 ಆಗಸ್ಟ್ 2024 (12:10 IST)
ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಂಚೆ ಉಟ್ಟುಕೊಂಡು ಪಕ್ಕಾ ಸಾಂಪ್ರದಾಯಿಕ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು ಬಳಿಕ ಈ ಖ್ಯಾತ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಯಶ್ ಕಿರು ಬ್ರೇಕ್ ಪಡೆದುಕೊಂಡು ಮಂಗಳೂರಿಗೆ ಬಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಂಚೆ ಮತ್ತು ಬಿಳಿ ಶರ್ಟ್ ಹಾಕಿಕೊಂಡು ಹೊರಬರುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಶ್ ಇಲ್ಲಿಂದ ನೇರವಾಗಿ ತೆರಳಿದ್ದು ಧರ್ಮಸ್ಥಳ ಕ್ಷೇತ್ರಕ್ಕೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಶ್ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಯಶ್ ಗೆ ಉಡುಗೊರೆ ನೀಡಿ ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದ್ದಾರೆ.

ಪ್ರತೀ ಬಾರಿ ತಮ್ಮ ಸಿನಿಮಾದ ಬಿಡುಗಡೆ ಅಥವಾ ಯಾವುದೇ ಘೋಷಣೆ ಸಂದರ್ಭದಲ್ಲಿ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಬಾರಿಯೂ ಅವರು ಧರ್ಮಸ್ಥಳಕ್ಕೆ ಭೇಟಿ ನೀಡುರುವುದನ್ನು ನೋಡಿದರೆ ಸದ್ಯದಲ್ಲೇ ಟಾಕ್ಸಿಕ್ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲೇ ಹೋದರೂ ಯಶ್ ಜೊತೆಗೆ ರಾಧಿಕಾ ಇದ್ದೇ ಇರುತ್ತಾರೆ. ಆದರೆ ಈ ಬಾರಿ ಯಶ್ ಏಕಾಂಗಿಯಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಂದನಾ ವಿಜಯ್ ಅಗಲಿ ಆಗಲೇ ಒಂದು ವರ್ಷ: ವಿಜಯ್ ರಾಘವೇಂದ್ರ, ಮಗ ಶೌರ್ಯ ಪೋಸ್ಟ್ ಕಣ್ಣೀರು ತರಿಸುತ್ತದೆ