Webdunia - Bharat's app for daily news and videos

Install App

ಆ ಒಂದು ಮಾಧ್ಯಮದ ಮೇಲೆ ಕಿಡಿ ಕಾರಿದ ರಾಕಿಂಗ್ ಸ್ಟಾರ್ ಯಶ್

Webdunia
ಶನಿವಾರ, 12 ಜನವರಿ 2019 (09:17 IST)
ಬೆಂಗಳೂರು: ಐಟಿ ದಾಳಿಗೊಳಗಾದ ಬಳಿಕ ವಿಚಾರಣೆಗಾಗಿ ನಿನ್ನೆಯಷ್ಟೇ ಐಟಿ ಕಚೇರಿ ಹೋಗಿ ಬಂದ ರಾಕಿಂಗ್ ಸ್ಟಾರ್ ಯಶ್ ಆ ಒಂದು ಮಾಧ್ಯಮದ ಮೇಲೆ ಕಿಡಿ ಕಾರಿದ್ದಾರೆ.


ತಮ್ಮ ಬಗ್ಗೆ ಇದ್ದಿದ್ದನ್ನು ಹೇಳುವುದು ಬಿಟ್ಟು, ಐಟಿ ಅಧಿಕಾರಿಗಳು ಹೇಳಿದ ದಿನಾಂಕಕ್ಕೆ ವಿಚಾರಣೆಗೆ ಬರದೇ ತಪ್ಪಿಸಿಕೊಂಡೆ. ತಮ್ಮ ಮೇಲೆ 40 ಕೋಟಿ ಸಾಲ ಇದೆ ಎಂದೆಲ್ಲಾ ಊಹಾಪೋಹ ಹಬ್ಬಿಸುತ್ತಿರುವ ಒಂದು ವಾಹಿನಿ ಮೇಲೆ ಯಶ್ ಕಿಡಿ ಕಾರಿದ್ದಾರೆ.

ಆದರೆ ಆ ಒಂದು ಮಾಧ್ಯಮ ಎಂದು ಯಶ್ ಹೇಳುತ್ತಿದ್ದಂತೆ ಆ ಮಾಧ್ಯಮದ ಹೆಸರು ಬಹಿರಂಗಪಡಿಸಿ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಒತ್ತಾಯಿಸಿದಾಗ ಯಶ್ ನಾನ್ಯಾಕೆ ಹೇಳಬೇಕು. ಮಾಡಿದವರಿಗೆ, ಜನತೆಗೆ ಗೊತ್ತಿರುತ್ತದೆ. ನಿಮಗೆ ನಾನು ಐಟಿ ವಿಚಾರಣೆಯ ಡೀಟೈಲ್ ಕೊಡಬೇಕಾದ ಅಗತ್ಯವಿಲ್ಲ. ಹಾಗಿದ್ದರೂ ಯಾಕೆ ಇಲ್ಲಿ ಬಂದು ಮಾತನಾಡುತ್ತಿದ್ದೇನೆ ಅಂದರೆ ಅದು ನಾವು ನಿಮಗೆ ಕೊಡುವ ಗೌರವ. ಹಾಗೇ ನಾನೂ ನೀವೂ ನನ್ನ ಮೇಲೆ ಅಷ್ಟೇ ಪ್ರೀತಿಯಿಟ್ಟುಕೊಂಡಿದ್ದೀರೆ. ಆದರೆ ನಾನು ಒಬ್ಬ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಬಾಯಿಗೆ ಬಂದ ಹಾಗೆ ವರದಿ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಆದರೆ ಕೊನೆಯವರೆಗೂ ಆ ಮಾಧ್ಯಮದ ಹೆಸರು ಹೇಳಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments