Publish Date: Sun, 29 Aug 2021 (10:00 IST)
Updated Date: Sun, 29 Aug 2021 (10:07 IST)
ಬೆಂಗಳೂರು: ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ನಿರ್ಮಿಸಲಿರುವ ಕಾಂತಾರ ಸಿನಿಮಾಗೆ ಚಾಲನೆ ಸಿಕ್ಕಿದೆ.
ಕುಂಭಾಶಿಯ ಆನೆಗುಡ್ಡ ವಿನಾಯಕ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಇದು ಪ್ರಕೃತಿ ಮತ್ತು ಮಾನವನ ನಡುವಿನ ಸಂಘರ್ಷದ ಕತೆ ಎಂದು ಚಿತ್ರತಂಡ ಈಗಾಗಲೇ ಸುಳಿವು ನೀಡಿದೆ.
ಹೀಗಾಗಿ ಅಂತಹದ್ದೊಂದು ಸುಂದರ ಹಿನ್ನಲೆಯಲ್ಲೇ ಚಿತ್ರೀಕರಣ ಪ್ರಾರಂಭವಾಗಿದೆ. ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕರಾಗಿಯೂ ರಿಷಬ್ ಶೆಟ್ಟಿ ಪಾತ್ರ ಮಾಡಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.