Select Your Language

Notifications

webdunia
webdunia
webdunia
webdunia

ಮೈಸೂರು ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರಿಗೆ ನಟ ಜಗ್ಗೇಶ್ ನಗದು ಬಹುಮಾನ

ಮೈಸೂರು ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರಿಗೆ ನಟ ಜಗ್ಗೇಶ್ ನಗದು ಬಹುಮಾನ
ಬೆಂಗಳೂರು , ಭಾನುವಾರ, 29 ಆಗಸ್ಟ್ 2021 (08:45 IST)
ಬೆಂಗಳೂರು: ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸೆರೆಹಿಡಿದ ಪೊಲೀಸರಿಗೆ ನವರಸನಾಯಕ ಜಗ್ಗೇಶ್ 1 ಲಕ್ಷ. ರೂ. ಬಹುಮಾನ ಘೋಷಿಸಿದ್ದಾರೆ.


ಈ ಹಿಂದೆ ಹೈದರಾಬಾದ್ ನಲ್ಲಿ ‘ದಿಶಾ’ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಹಿಡಿದ ಪೊಲೀಸರಿಗೂ ಜಗ್ಗೇಶ್ ನಗದು ಬಹುಮಾನ ನೀಡಿದ್ದರು.

ಇದೀಗ ಮೈಸೂರಿನ ಕಾಮುಕರನ್ನು ಸೆರೆಹಿಡಿದ ಪೊಲೀಸ್ ತಂಡಕ್ಕೆ 1 ಲಕ್ಷ ರೂ. ಬಹುಮಾನ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ‘ಕಾಲೇಜು ವಿದ್ಯಾರ್ಥಿ ಅತ್ಯಾಚಾರ ಮಾಡಿದ ಕಾಮಪಿಪಾಸುಗಳ ಬಂಧಿಸಿದ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. ನನ್ನ ಕಡೆಯಿಂದ ಪ್ರಕರಣ ಬೇಧಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೇ ಮುಂದುವರಿಯಲಿ’ ಎಂದು ಜಗ್ಗೇಶ್ ಅಭಿನಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಮಾಡಿದ್ದೇನೆ... ಪರವಾಗಿಲ್ಲ ಎಂದ ಶಿಲ್ಪಾ ಶೆಟ್ಟಿ ಮಾಡಿರುವ ಆ ಮಿಸ್ಟೇಕ್ ಆದರೂ ಏನು ಗೊತ್ತಾ..!