Select Your Language

Notifications

webdunia
webdunia
webdunia
webdunia

ಸೀತಾಪಹರಣ ನೋಡಿ ಭಾವುಕರಾದ ‘ರಾವಣ’!

ಸೀತಾಪಹರಣ ನೋಡಿ ಭಾವುಕರಾದ ‘ರಾವಣ’!
ನವದೆಹಲಿ , ಮಂಗಳವಾರ, 14 ಏಪ್ರಿಲ್ 2020 (10:22 IST)
ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ಧಾರವಾಹಿಯ ಮರು ಪ್ರಸಾರ ಈಗ ಜನಪ್ರಿಯವಾಗಿದೆ. ಈ ಧಾರವಾಹಿಯಲ್ಲಿ ಸೀತಾಪಹರಣದ ದೃಶ್ಯ ನೋಡಿ ಸ್ವತಃ ರಾವಣ ಪಾತ್ರಧಾರಿ ಅರವಿಂದ್ ತ್ರಿವೇದಿ ಭಾವುಕರಾದ ಘಟನೆ ನಡೆದಿದೆ.


ಈ ಧಾರವಾಹಿಯಲ್ಲಿ ರಾವಣನಾಗಿ ಮಿಂಚಿರುವ ಅರವಿಂದ್ ತ್ರಿವೇದಿಗೆ ಈಗ 84 ವರ್ಷ. ಇದೀಗ ಮರುಪ್ರಸಾರದ ಎಪಿಸೋಡ್ ಗಳನ್ನು ಸಾಮಾನ್ಯ ವೀಕ್ಷಕರಂತೇ ಅವರೂ ಕುತೂಹಲದಿಂದ ನೋಡುತ್ತಿದ್ದಾರೆ.

ತಾವು ಅಭಿನಯಿಸಿರುವ ಸೀತಾಪಹರಣದ ದೃಶ್ಯ ನೋಡುವಾಗಲಂತೂ ಅವರಿಗೇ ದುಃಖ ತಡೆಯಲಾಗಲಿಲ್ಲವಂತೆ. ಈ ಪಾತ್ರ ನಿಭಾಯಿಸಿ 30 ವರ್ಷಗಳೇ ಕಳೆದರೂ ಅವರಿಗೆ ಹಳೆಯ ನೆನಪು ಮಾಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಮಿಕರ ಸಂಘಕ್ಕೆ ನಟ ಉಪೇಂದ್ರ ದೇಣಿಗೆ