Select Your Language

Notifications

webdunia
webdunia
webdunia
webdunia

ಸೆಹ್ವಾಗ್ ಮಾಡಿದ ಒಂದು ಟ್ವೀಟ್ ನಿಂದ ಅಭಿಮಾನಿಗಳಿಗೆ ದ್ರಾವಿಡ್ ನೆನಪಾಯ್ತು!

ಸೆಹ್ವಾಗ್ ಮಾಡಿದ ಒಂದು ಟ್ವೀಟ್ ನಿಂದ ಅಭಿಮಾನಿಗಳಿಗೆ ದ್ರಾವಿಡ್ ನೆನಪಾಯ್ತು!
ನವದೆಹಲಿ , ಸೋಮವಾರ, 13 ಏಪ್ರಿಲ್ 2020 (10:23 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ಆಗಾಗ ತಮ್ಮ ಫನ್ನಿ ಟ್ವೀಟ್ ಗಳಿಂದ ಸುದ್ದಿಯಾಗುತ್ತಾರೆ. ಈ ಬಾರಿ ಸೆಹ್ವಾಗ್ ಮಾಡಿದ ಒಂದು ಟ್ವೀಟ್ ನಿಂದ ಅಭಿಮಾನಿಗಳಿಗೆ ದ್ರಾವಿಡ್ ನೆನಪಾಗಿದ್ದಾರೆ.


ದೂರದರ್ಶನ ಚಾನೆಲ್ ನಲ್ಲಿ ಪ್ರಸಾರವಾಗುವ ರಾಮಾಯಣ ಧಾರವಾಹಿಯ ‘ಅಂಗದ’ ಪಾತ್ರಧಾರಿ ರಾವಣನ ಆಸ್ಥಾನದಲ್ಲಿ ಮುಂದಡಿಯಿಟ್ಟು ಗಟ್ಟಿಯಾಗಿ ನೆಲೆಯೂರುವ ಚಿತ್ರವೊಂದನ್ನು ಟ್ವೀಟ್ ಮಾಡಿದ ಸೆಹ್ವಾಗ್, ನನಗೆ ಬ್ಯಾಟಿಂಗ್ ಸ್ಪೂರ್ತಿಯಾಗಿದ್ದು ಇವರೇ. ಕಾಲು ಹಿಂದೆ ಸರಿಸುವುದು ಕಷ್ಟವಲ್ಲ, ಅಸಾಧ‍್ಯ ಎಂದು ಟ್ವೀಟ್ ಮಾಡಿದ್ದರು.

ಇದನ್ನು ನೋಡಿ ಅಭಿಮಾನಿಗಳು ರಾಹುಲ್ ದ್ರಾವಿಡ್ ರನ್ನು ನೆನೆಸಿಕೊಂಡಿದ್ದಾರೆ. ದ್ರಾವಿಡ್ ಟೆಸ್ಟ್ ಕ್ರಿಕೆಟ್ ನಲ್ಲಿ ಕ್ರೀಸ್ ಗೆ ಬಂದರೆ ಹೀಗೇ ಕಾಲೂರಿ ನಿಲ್ಲುತ್ತಾರೆ. ನಂತರ ಅವರನ್ನು ಅಲ್ಲಾಡಿಸಲೂ ಯಾರಿಂದಲೂ ಆಗಲ್ಲ ಎಂದು ಹಲವರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಕ್ರಿಕೆಟಿಗನಿಗೆ ವೈದ್ಯರಿಗೂ ಮಾಡಲಾಗದ ನೆರವು ಮಾಡಿದ್ದ ಅನಿಲ್ ಕುಂಬ್ಳೆ!