Select Your Language

Notifications

webdunia
webdunia
webdunia
webdunia

ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!

ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!
ಬೆಂಗಳೂರು , ಶನಿವಾರ, 11 ಮೇ 2019 (17:48 IST)
ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಹಾಡು, ಟೈಲರ್ ಗಳ ಮೂಲಕ ಭರ್ಜರಿಯಾಗಿಯೇ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಇದೇ ಹದಿನೇಳನೇ ತಾರೀಕಿನಂದು ತೆರೆ ಕಾಣುತ್ತಿದೆ.

ಈ ಚಿತ್ರದ ಹಿಂದೆ ಪ್ರತಿಭಾವಂತ ಯುವಕರದ್ದೊಂದು ತಂಡವೇ ಇದೆ. ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತರಬೇತಿ ಪಡೆದುಕೊಂಡು, ಸಿನಿಮಾ ಕನಸಿನ ಹಾದಿಯಲ್ಲಿ ಸಾಗಿ ಬಂದವರೇ.
webdunia
ವಿಶೇಷವೆಂದರೆ, ಈ ಚಿತ್ರದ ನಾಯಕ ರಾಜ್ ಚರಣ್ ಮತ್ತು ನಾಯಕಿಯರಲ್ಲೊಬ್ಬರಾಗಿರೋ ಅಖಿಲಾ ಪ್ರಕಾಶ್ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿಕೊಂಡವರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆಯಿಂದ ಈ ವರೆಗೂ ಚಿತ್ರರಂಗಕ್ಕೆ ಹಲವಾರು ಪ್ರತಿಭಾನ್ವಿತರು ಆಗಮಿಸಿದ್ದಾರೆ. ನಾನಾ ವಿಭಾಗಗಳಲ್ಲಿ ನೆಲೆಯನ್ನೂ ಕಂಡುಕೊಂಡಿದ್ದಾರೆ. ಈ ಸಾಲಿನಲ್ಲಿ ರಾಜ್ ಚರಣ್ ಮತ್ತು ಅಖಿಲಾ ಕೂಡಾ ಸೇರಿಕೊಳ್ಳೋದು ಗ್ಯಾರೆಂಟಿ.
webdunia
ಯಾಕೆಂದರೆ ರತ್ನಮಂಜರಿಯಲ್ಲಿ ಪ್ರತೀ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂಥಾ ಪಾತ್ರವೇ ರಾಜ್ ಚರಣ್ ಮತ್ತು ಅಖಿಲಾ ಅವರುಗಳಿಗೆ ಸಿಕ್ಕಿದೆ. ರಾಜ್ ಚರಣ್ ಅವರಿಗಂತೂ ಮೊದಲ ಚಿತ್ರದಲ್ಲಿಯೇ ಸವಾಲಿನ ಪಾತ್ರವೇ ಸಿಕ್ಕಂತಾಗಿದೆ. ಅವರ ಪಾತ್ರಕ್ಕೆ ಬೇರೆ ಬೇರೆ ರೀತಿಯ ಶೇಡುಗಳಿವೆಯಂತೆ.
webdunia


ಪಳಗಿದ ನಟರು ಮಾತ್ರವೇ ನಿಭಾಯಿಸುವಂಥಾ ಪಾತ್ರಕ್ಕೆ ಅವರು ಜೀವ ತುಂಬಿದ್ದಾರಂತೆ. ಅಂತೂ ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ಮೂಲಕ ಮತ್ತಿಬ್ಬರು ನಾಗತಿಹಳ್ಳಿ ಗರಡಿಯ ಪ್ರತಿಭೆಗಳ ಆಗಮನವಾದಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಾಗಲಿರುವ ಸಲ್ಮಾನ್ ಖಾನ್!