Select Your Language

Notifications

webdunia
webdunia
webdunia
webdunia

'ರಾಕ್ಷಸ್‌' ಸಿನಿಮಾದಿಂದ ಹೊರಬಂದ ರಣವೀರ್‌ ಸಿಂಗ್:‌ ಹೊಸ ನಾಯಕನ ಹುಡುಕಾಟದಲ್ಲಿ ಚಿತ್ರತಂಡ

'ರಾಕ್ಷಸ್‌' ಸಿನಿಮಾದಿಂದ ಹೊರಬಂದ ರಣವೀರ್‌ ಸಿಂಗ್:‌ ಹೊಸ ನಾಯಕನ ಹುಡುಕಾಟದಲ್ಲಿ ಚಿತ್ರತಂಡ

sampriya

ಬೆಂಗಳೂರು , ಮಂಗಳವಾರ, 21 ಮೇ 2024 (19:46 IST)
Photo Credit Facebook
ಬೆಂಗಳೂರು: ಹನುಮಾನ್‌ ಚಿತ್ರವನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರ ಮುಂದಿನ ಚಿತ್ರದಿಂದ ರಣವೀರ್‌ ಸಿಂಗ್‌ ಹೊರ ಬಂದಿದ್ದಾರೆ.

ಕೆಲ ಮನಸ್ತಾಪಗಳಿಂದ ರಣವೀರ್‌ ಸಿಂಗ್‌ ಅವರು ‘ರಾಕ್ಷಸ್’ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.  ಚಿತ್ರದ ಕಥೆ ಸಂಬಂಧಿಸಿದಂತೆ ಇವರಲ್ಲಿ ಮನಸ್ತಾಪ ಮೂಡಿದೆ ಎನ್ನಲಾಗಿದೆ. ಇತ್ತೀಚೆಗೆ ರಣ್‌ವೀರ್ ಹೈದರಾಬಾದ್‌ಗೆ ಹೋಗಿ ಸಿನಿಮಾದ ಫೋಟೊಶೂಟ್‌ನಲ್ಲಿ ಸಹ ಭಾಗಿಯಾಗಿ ಬಂದಿದ್ದರು. ಆದರೆ ಅದಾದ ಬಳಿಕ ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಈ ಬೆಳವಣಿಗೆಯಾಗಿದೆ.

ಇದೀಗ ರಣ್‌ವೀರ್ ಗುಡ್‌ಬೈ ಹೇಳಿದ ಸಿನಿಮಾಗಾಗಿ ಹೊಸ ನಾಯಕನ ನಟನ ಹುಡುಕಾಟ ಶುರುವಾಗಿದೆ. ಸದ್ಯ ಸಿಂಗಂ ಅಗೇನ್, ಡಾನ್ 3, ಡೈರೆಕ್ಟರ್ ಎಸ್. ಶಂಕರ್ ಜೊತೆ ‘ಅನ್ನಿಯನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಕೆಂಡ್‌ ಹ್ಯಾಂಡ್‌ ಬಟ್ಟೆ ಧರಿಸುವ ಮಗನ ಕೊಂಡಾಡಿದ ಅಕ್ಷಯ್‌ ಕುಮಾರ್‌