Select Your Language

Notifications

webdunia
webdunia
webdunia
webdunia

ಕಾರ್ಮಿಕರ ದಿನವನ್ನು ಕಸ ಸಂಗ್ರಹಿಸುವವರಿಗೆ ಅರ್ಪಿಸಿದ ನಟ ರಮೇಶ್ ಅರವಿಂದ್

ರಮೇಶ್  ಅರವಿಂದ್
ಬೆಂಗಳೂರು , ಶುಕ್ರವಾರ, 1 ಮೇ 2020 (10:04 IST)
ಬೆಂಗಳೂರು: ಕಾರ್ಮಿಕರ ದಿನವಾಗಿರುವ ಇಂದು ವಿಶ್ವದಾದ್ಯಂತ ದುಡಿಯುವ ವರ್ಗಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಸ್ಯಾಂಡಲ್ ವುಡ್ ನಟರೂ ಕಾರ್ಮಿಕರ ದಿನಕ್ಕೆ ಶುಭಾಷಯ ಕೋರಿದ್ದಾರೆ.


ನಟ ರಮೇಶ್ ಅರವಿಂದ್ ಕಾರ್ಮಿಕರ ದಿನವನ್ನು ಪ್ರತಿನಿತ್ಯ ನಮ್ಮ ಮನೆ ಎದುರು ಬಂದು ಕಸ ಸಂಗ್ರಹಿಸುವ ಕಾರ್ಮಿಕರಿಗೆ ಅರ್ಪಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಮೇಶ್ ಅರವಿಂದ್ ಕಸ ಸಂಗ್ರಹಿಸುವ ಕಾರ್ಮಿಕರಿಗೆ ಗೌರವ ಸಮರ್ಪಿಸಿದ್ದಾರೆ.

ತಮ್ಮ ಮನೆ ಎದುರು ಬರುವ ಕಸ ಸಂಗ್ರಹಿಸುವ ಬಿಬಿಎಂಪಿ ಕಾರ್ಮಿಕರಿಗೆ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿರುವ ರಮೇಶ್, ನೀವಿಲ್ಲದ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ರಿಷಿ ಕಪೂರ್ ಕೊನೆಯಾಸೆ ನೆರವೇರಲೇ ಇಲ್ಲ!