Publish Date: Thu, 16 May 2019 (08:51 IST)
Updated Date: Thu, 16 May 2019 (08:56 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ನಲ್ಲಿ ನಾಲ್ಕು ವಾರಗಳಿಂದ ರಮೇಶ್ ಅರವಿಂದ್ ದಾಡಿ ಅವತಾರ ನೋಡಿ ಪ್ರೇಕ್ಷಕರು ಗಡ್ಡ ಯಾವಾಗ ತೆಗೀತೀರಿ ಎಂಬ ಪ್ರಶ್ನೆ ಕೇಳಿಬರುತ್ತಿತ್ತು. ಅದೀಗ ನೆರವೇರುತ್ತಿದೆ.
ಪ್ರೇಕ್ಷಕರ ಕೋರಿಕೆಯಂತೆ ರಮೇಶ್ ಗಡ್ಡಕ್ಕೆ ಕತ್ತರಿ ಹಾಕಿದ್ದು, ಈ ವಾರದ ಎಪಿಸೋಡ್ ನಲ್ಲಿ ತಮ್ಮ ಹಿಂದಿನ ಲುಕ್ ಗೆ ಮರಳಿ ಸುರ ಸುಂದರಾಂಗ ಎನಿಸಿಕೊಂಡಿದ್ದಾರೆ.
ರಮೇಶ್ ಅರವಿಂದ್ ಉದ್ದನೆಯ ಮೀಸೆ ಉಳಿಸಿಕೊಂಡಿದ್ದರೂ ಗಡ್ಡ ಬೋಳಿಸಿದ್ದಾರೆ. ಇದನ್ನು ನೋಡಿ ಪ್ರೇಕ್ಷಕರೂ ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ವೀಕೆಂಡ್ ವಿತ್ ರಮೇಶ್ ನಲ್ಲಿ ಸಿನಿಮಾದವರನ್ನು ಮಾತ್ರ ಕರೆತರುತ್ತಿರುವುದಕ್ಕೆ ಪ್ರೇಕ್ಷಕರು ತೀರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ