ಸಿನಿಮಾ ಕನಸು, ಪ್ರೀತಿ, ಪ್ರೇರಣೆ ಬಗ್ಗೆ ಮುಕ್ತವಾಗಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

Webdunia
ಸೋಮವಾರ, 3 ಜುಲೈ 2023 (16:01 IST)
ಬೆಂಗಳೂರು: ಇಂದು ಗುರುಪೂರ್ಣಿಮೆ ದಿನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಹಂಚಿಕೊಂಡು ತಮ್ಮ ಮುಂದಿನ ಎರಡು ಸಿನಿಮಾ ಕತೆಗಳಿಗೆ ಸ್ಪೂರ್ತಿ ಯಾರು ಎಂದು ಹೇಳಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಕೆಲವು ವರ್ಷಗಳ ಬ್ರೇಕ್ ನ ನಂತರ ನಿರ್ದೇಶನಕ್ಕೆ ಮರಳುತ್ತಿರುವ ಸಿನಿಮಾ ರಿಚರ್ಡ್ ಆಂಟನಿ ಹಾಗೂ ಪುಣ್ಯ ಕೋಟಿ. ಈ ಎರಡೂ ಸಿನಿಮಾಗಳಿಗೆ ತಮಗೆ ಪ್ರೇರಣೆ ಜೊತೆಗೆ ತಮ್ಮ ಸಿನಿಮಾ ಕನಸು, ನಿರ್ದೇಶನದ ಮೇಲಿನ ಪ್ರೀತಿಯ ಬಗ್ಗೆ ರಕ್ಷಿತ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಬಾಲ್ಯದಲ್ಲಿದ್ದಾಗ ಉಡುಪಿಯ ದೇವಾಲಯಗಳಿಗೆ ಅಮ್ಮನ ಕೈ ಹಿಡಿದು ಹೋಗುತ್ತಿದ್ದ ನೆನಪುಗಳನ್ನು ಹಂಚಿಕೊಂಡ ರಕ್ಷಿತ್, ಅದು ನನ್ನ ಕನಸು ಹುಟ್ಟಿದ ಜಾಗ ಎಂದಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ ಪರಶುರಾಮ ಮತ್ತು ಆತನ ಕೊಡಲಿಯೇ ಸ್ಪೂರ್ತಿ ಎಂದಿದ್ದಾರೆ. ಈ ಎರಡು ಸಿನಿಮಾಗಳ ಕನಸಿನೊಂದಿಗೆ ನಾಲ್ಕು ವರ್ಷ ಕಳೆದಿದ್ದೇನೆ, ಇನ್ನೂ ನಾಲ್ಕು ವರ್ಷ ಹೀಗೆಯೇ ಕಳೆಯೋದು ಇದೆ ಅನಿಸುತ್ತದೆ. ನಿರ್ದೇಶಕನ ಸೀಟ್ ನಲ್ಲಿ ಕೂರುವುದು ಯಾವತ್ತೂ ನನಗೆ ವಿಶೇಷ ಖುಷಿ ಕೊಡುತ್ತದೆ. ಮತ್ತೆ ವರ್ಷಗಳ ಬ್ರೇಕ್ ನ ನಂತರ ಅದೇ ಸೀಟ್ ನಲ್ಲಿ ಕೂರುತ್ತಿರುವುದರ ಸಂತೋಷವೇ ಬೇರೆ ಎಂದು ತಮ್ಮ ಕನಸುಗಳ ಬಗ್ಗೆ ವಿಡಿಯೋದಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ ರಕ್ಷಿತ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್‌ಗೆ ಜೀವಾವಧಿ ಕೊಟ್ರು ಓಕೆ, ದರ್ಶನ್ ಪರ ವಕೀಲರ ವಾದ ಹೀಗಿತ್ತು

ಮಾಜಿ ಗೆಳತಿಯ ಮುಖದಲ್ಲಿ ಸದಾ ನಗುವನ್ನು ಬಯಸಿದ ನಟ ಅರ್ಜುನ್ ಕಪೂರ್

BBK12: ಕಳಪೆ ಕೊಟ್ಟಿದ್ದಕ್ಕೆ ದುರಹಂಕಾರ ತೋರಿಸ್ತಿದ್ದಾರಾ ಅಶ್ವಿನಿ ಗೌಡ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

ಮುಂದಿನ ಸುದ್ದಿ
Show comments