Webdunia - Bharat's app for daily news and videos

Install App

ಹೀರೋ ಆಗಿ ನಿನ್ನನ್ನು ಯಾರು ನೋಡ್ತಾರೆಂದು ವ್ಯಂಗ್ಯ ಮಾಡಿದ್ದರು: ರಾಜ್‌ ಬಿ ಶೆಟ್ಟಿ

Sampriya
ಶನಿವಾರ, 9 ಆಗಸ್ಟ್ 2025 (15:13 IST)
Photo Credit X
ಬೆಂಗಳೂರು: ನನ್ನ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆ ಮಾಡಿದಾಗ ನಿನ್ನ ಹೀರೋ ಆಗಿ ಯಾರೋ ನೋಡುತ್ತಾರೆಂಬ ಮಾತನ್ನು ಹೇಳಿದ್ದರು ಎಂದು ನಟ, ನಿರ್ದೇಶಕ, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಮೊದಲ ಸಿನಿಮಾದ ಅನುಭವವನ್ನು ಹಂಚಿಕೊಂಡಿದ್ದಾರೆ.   

ಸದ್ದಿಲ್ಲದೆ ಥಿಯೇಟರ್‌ಗೆ ಬಂದು ಇದೀಗ ಗಡಿದಾಟಿ ಸದ್ದು ಮಾಡುತ್ತಿರುವ ಸು ಫ್ರಮ್ ಸೋ ಸಿನಿಮಾಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇರಳದಲ್ಲೂಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. 

ಸಿನಿಮಾ ಯಶಸ್ವಿನ ಬಳಿಕ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಒಂದು ಮೊಟ್ಟೆಯ ಕತೆ ಸಿನಿಮಾ ಸಂದರ್ಭದಲ್ಲಿ ಬಂದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಒಂದು ಮೊಟ್ಟೆಯ ಕಥೆಯಲ್ಲಿ ಸಿನಿಮಾದಲ್ಲಿ ನಾನು ಹೀರೋ ಆಗಿ ಅಭಿನಯಿಸುತ್ತಿದ್ದೇನೆ ಎಂದಾಗ ಹೀರೋ ಆಗಿ ನಿನ್ನನ್ನು ಯಾರು ನೋಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದರು. ಆದರೆ ಆ ಸಿನಿಮಾದ ಪಾತ್ರಕ್ಕೆ ನನ್ನ ಲುಕ್‌ ಬೇಕಾಗಿತ್ತು. ನಾನು ಹೀರೋ ಆಗಿ ನೋಡ್ಬೇಕು ಅಂತ ಇರಲಿಲ್ಲ. ಆ ಪಾತ್ರದ ಲುಕ್‌ಗೆ ಬೇರೆ ಯಾರು ಸಿಗದೇ ಇದ್ದಾಗ ನಾನೇ ಅಭಿನಯಿಸಬೇಕಾಯಿತು. 

ಆ ಸಿನಿಮಾ ನೋಡಿ ಹಂಚಿಕೆದಾರರು ಈ ಸಿನಿಮಾ ವರ್ಕ್ ಆಗಲ್ಲ ಎಂದಿದ್ದರು. ಆದರೇ ಪ್ರೇಕ್ಷಕರು ಅದನ್ನು ಸುಳ್ಳು ಎಂದು ನಿರೂಪಿಸಿದರು. ಆ ಸಿನಿಮಾದಿಂದ ಕಲಿತಿದ್ದು ಏನಂದ್ರೆ ನಾನು ಸಿನಿಮಾ ಮಾಡಿದಾಗ ಪ್ರೇಕ್ಷಕರಿಗೆ ಮೋಸ ಮಾಡಬಾರದೆಂದು. 

ಹಾಗಾಗಿ ನನಗೆ ನಿಜಜೀವನದ ಅನುಭವದ ಕಥೆಗಳನ್ನು ತೆರೆ ಮೇಲೆ ತರುತ್ತೇವೆ ಎಂದರು. 


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ಮುಂದಿನ ಸುದ್ದಿ
Show comments