ಹೀರೋ ಆಗಿ ನಿನ್ನನ್ನು ಯಾರು ನೋಡ್ತಾರೆಂದು ವ್ಯಂಗ್ಯ ಮಾಡಿದ್ದರು: ರಾಜ್‌ ಬಿ ಶೆಟ್ಟಿ

Sampriya
ಶನಿವಾರ, 9 ಆಗಸ್ಟ್ 2025 (15:13 IST)
Photo Credit X
ಬೆಂಗಳೂರು: ನನ್ನ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆ ಮಾಡಿದಾಗ ನಿನ್ನ ಹೀರೋ ಆಗಿ ಯಾರೋ ನೋಡುತ್ತಾರೆಂಬ ಮಾತನ್ನು ಹೇಳಿದ್ದರು ಎಂದು ನಟ, ನಿರ್ದೇಶಕ, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಮೊದಲ ಸಿನಿಮಾದ ಅನುಭವವನ್ನು ಹಂಚಿಕೊಂಡಿದ್ದಾರೆ.   

ಸದ್ದಿಲ್ಲದೆ ಥಿಯೇಟರ್‌ಗೆ ಬಂದು ಇದೀಗ ಗಡಿದಾಟಿ ಸದ್ದು ಮಾಡುತ್ತಿರುವ ಸು ಫ್ರಮ್ ಸೋ ಸಿನಿಮಾಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇರಳದಲ್ಲೂಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. 

ಸಿನಿಮಾ ಯಶಸ್ವಿನ ಬಳಿಕ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಒಂದು ಮೊಟ್ಟೆಯ ಕತೆ ಸಿನಿಮಾ ಸಂದರ್ಭದಲ್ಲಿ ಬಂದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಒಂದು ಮೊಟ್ಟೆಯ ಕಥೆಯಲ್ಲಿ ಸಿನಿಮಾದಲ್ಲಿ ನಾನು ಹೀರೋ ಆಗಿ ಅಭಿನಯಿಸುತ್ತಿದ್ದೇನೆ ಎಂದಾಗ ಹೀರೋ ಆಗಿ ನಿನ್ನನ್ನು ಯಾರು ನೋಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದರು. ಆದರೆ ಆ ಸಿನಿಮಾದ ಪಾತ್ರಕ್ಕೆ ನನ್ನ ಲುಕ್‌ ಬೇಕಾಗಿತ್ತು. ನಾನು ಹೀರೋ ಆಗಿ ನೋಡ್ಬೇಕು ಅಂತ ಇರಲಿಲ್ಲ. ಆ ಪಾತ್ರದ ಲುಕ್‌ಗೆ ಬೇರೆ ಯಾರು ಸಿಗದೇ ಇದ್ದಾಗ ನಾನೇ ಅಭಿನಯಿಸಬೇಕಾಯಿತು. 

ಆ ಸಿನಿಮಾ ನೋಡಿ ಹಂಚಿಕೆದಾರರು ಈ ಸಿನಿಮಾ ವರ್ಕ್ ಆಗಲ್ಲ ಎಂದಿದ್ದರು. ಆದರೇ ಪ್ರೇಕ್ಷಕರು ಅದನ್ನು ಸುಳ್ಳು ಎಂದು ನಿರೂಪಿಸಿದರು. ಆ ಸಿನಿಮಾದಿಂದ ಕಲಿತಿದ್ದು ಏನಂದ್ರೆ ನಾನು ಸಿನಿಮಾ ಮಾಡಿದಾಗ ಪ್ರೇಕ್ಷಕರಿಗೆ ಮೋಸ ಮಾಡಬಾರದೆಂದು. 

ಹಾಗಾಗಿ ನನಗೆ ನಿಜಜೀವನದ ಅನುಭವದ ಕಥೆಗಳನ್ನು ತೆರೆ ಮೇಲೆ ತರುತ್ತೇವೆ ಎಂದರು. 


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಮುಂದಿನ ಸುದ್ದಿ
Show comments