Select Your Language

Notifications

webdunia
webdunia
webdunia
webdunia

ಸ್ಮಶಾನ ಕಾರ್ಮಿಕರಿಗೆ ನೆರವಾದ ನಟಿ ರಾಗಿಣಿ ದ್ವಿವೇದಿ

ಸ್ಮಶಾನ ಕಾರ್ಮಿಕರಿಗೆ ನೆರವಾದ ನಟಿ ರಾಗಿಣಿ ದ್ವಿವೇದಿ
ಬೆಂಗಳೂರು , ಗುರುವಾರ, 6 ಮೇ 2021 (09:09 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಸಮಯದಲ್ಲಿ ನಟಿ ರಾಗಿಣಿ ದ್ವಿವೇದಿ ಸಂಕಷ್ಟದಲ್ಲಿರುವ ಸ್ಮಶಾನ ಕಾರ್ಮಿಕರ ನೆರವಿಗೆ ಬಂದಿದ್ದಾರೆ.


ಕಳೆದ ಬಾರಿ ಲಾಕ್ ಡೌನ್ ನಡುವೆ ಆರೋಗ್ಯ ಕಾರ್ಯಕರ್ತರು, ಬಿಬಿಎಂಪಿ ನೌಕರರಿಗೆ ಆಹಾರದ ಪೊಟ್ಟಣ ಒದಗಿಸುವ ಮೂಲಕ ನೆರವಾಗಿದ್ದ ರಾಗಿಣಿ ಈ ಬಾರಿ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗಿದ್ದಾರೆ.

ಈ ಕಾರ್ಮಿಕರಿಗೆ ಅಗತ್ಯ ವಸ್ತು, ರೇಷನ್ ಒದಗಿಸುವ ಮೂಲಕ ರಾಗಿಣಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಅವರೊಂದಿಗೆ ಕೆಲವು ಕಾಲ ಕಳೆದಿದ್ದಾರೆ. ನಟಿಯ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ವೇಳೆ ಕಾಡಿನಲ್ಲಿ ದಿಗ್ಗಿ-ಐಂದ್ರಿತಾ ಪ್ರವಾಸ