Select Your Language

Notifications

webdunia
webdunia
webdunia
webdunia

ದರ್ಶನ್ ನೋಡಿ ಕಣ್ಣೀರು ಹಾಕಿದ್ದ ರಚಿತಾ ರಾಮ್ ಬಳಿಕ ನೇರವಾಗಿ ತೆರಳಿದ್ದು ಇಲ್ಲಿಗೆ

Rachitha Ram

Krishnaveni K

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (08:50 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ನೋಡಲು ಜೈಲಿಗೆ ಬಂದಿದ್ದ ನಟಿ ರಚಿತಾ ರಾಮ್ ಬಳಿಕ ನೇರವಾಗಿ ಅಲ್ಲಿಂದ ಈ ವಿಶೇಷ ಸ್ಥಳಕ್ಕೆ ತೆರಳಿದ್ದಾರೆ.

ನಟ ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದ ಬಳಿಕ ರಚಿತಾ ರಾಮ್ ಭಾವುಕರಾಗಿದ್ದರು. ರಾಜ ರಾಜನಂತೆ ಇದ್ದರೇ ಚೆನ್ನ. ದರ್ಶನ್ ಸರ್ ನ್ನು ಈ ರೀತಿ ನೋಡಲು ಸಾಧ್ಯವಾಗುತ್ತಿಲ್ಲ. ಅವರ ಋಣ ನಮ್ಮಿಡೀ ಕುಟುಂಬಕ್ಕಿದೆ. ಬಿಂದ್ಯಾ ಆಗಿದ್ದ ನಾನು ರಚಿತಾ ರಾಮ್ ಆಗಲು ದರ್ಶನ್ ಸರ್ ಅವರೇ ಕಾರಣ ಎಂದು ರಚಿತಾ ಕಣ್ಣೀರು ಹಾಕಿದ್ದರು.

ದರ್ಶನ್ ರನ್ನು ಜೈಲಿನಲ್ಲಿ ಭೇಟಿಯಾದ ಬಳಿಕ ರಚಿತಾ ರಾಮ್ ನೇರವಾಗಿ ಮಂತ್ರಾಲಯಕ್ಕೆ ತೆರಳಿದ್ದಾರೆ. ಮಂತ್ರಾಲಯದಲ್ಲಿ ಈಗ ಗುರು ರಾಘವೇಂದ್ರರ ಆರಾಧನಾ ಮಹೋತ್ಸವ ನಡೆಯುತ್ತಿದೆ. ರಾಯರ ದರ್ಶನ ಪಡೆದ ರಚಿತಾ ಪಾದುಕೆಗೆ ಆರತಿ ಮಾಡಿ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಾರೆ.

ರಚಿತಾ ಈ ಹಿಂದೆಯೂ ಅನೇಕ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ರಾಯರ ದರ್ಶನಕ್ಕೆ ಆಗಾಗ ಬರುವ ರಚಿತಾ ಈಗ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಭೇಟಿ ಕೊಟ್ಟಿದ್ದಾರೆ. ಈಗಾಗಲೇ ಅನೇಕ ವಿಐಪಿಗಳೂ ರಾಯರ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ಜತೆಗಿನ ಮದುವೆಗಿಂತಲೂ ಶೋಭಿತಳೊಂದಿಗೆ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ ನಾಗಚೈತನ್ಯ