Publish Date: Tue, 10 Aug 2021 (17:09 IST)
Updated Date: Tue, 10 Aug 2021 (17:10 IST)
ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಫೈಟರ್ ವಿವೇಕ್ ಸಾವಿಗೆ ಸಂತಾಪ ಸೂಚಕವಾಗಿ ಸಂದೇಶವನ್ನೂ ಹಾಕದೇ ಸೆಲ್ಫೀ ಪ್ರಕಟಿಸಿದ ರಚಿತಾ ರಾಮ್ ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿವೇಕ್ ದುರಂತದ ವೇಳೆ ನಾಯಕ ನಟ ಅಜೇಯ್ ರಾವ್ ಜೊತೆಗೆ ರಚಿತಾ ಕೂಡಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ ಈ ದುರಂತದ ಬಗ್ಗೆ ಕನಿಷ್ಠ ಸಂತಾಪ ಹೇಳದೇ ತಮ್ಮದೇ ಸೆಲ್ಫೀ ಹಾಕಿಕೊಂಡ ರಚಿತಾಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ನಿಮ್ಮದೇ ಸೆಟ್ ನಲ್ಲಿ ಕ್ರೇನ್ ಬಿದ್ದು ಒಬ್ಬರ ಸಾವಾಗಿದೆ. ನೀವು ಫೋಟೋ ಹಾಕಿಕೊಂಡಿದ್ದೀರಾ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರೋಲ್ ಆದ ಬಳಿಕ ಮತ್ತೊಂದು ಪೋಸ್ಟ್ ಮಾಡಿದ ಅವರು ದುರಂತ ಸಾವಿಗೀಡಾದ ವಿವೇಕ್ ಗೆ ಸಂತಾಪ ವ್ಯಕ್ತಪಡಿಸಿದರು. ಆದರೆ ಇದಕ್ಕೂ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.