Select Your Language

Notifications

webdunia
webdunia
webdunia
webdunia

ರಾವಣನ ಕೊಲ್ಲಲು ರಾಮನೇ ಆಗಬೇಕೆಂದಿಲ್ಲ ಅಂತಿದ್ದಾರೆ ರಚಿತಾ ರಾಮ್

ರಾವಣನ ಕೊಲ್ಲಲು ರಾಮನೇ ಆಗಬೇಕೆಂದಿಲ್ಲ ಅಂತಿದ್ದಾರೆ ರಚಿತಾ ರಾಮ್
ಬೆಂಗಳೂರು , ಗುರುವಾರ, 22 ಏಪ್ರಿಲ್ 2021 (10:20 IST)
ಬೆಂಗಳೂರು: ನಟಿ ರಚಿತಾ ರಾಮ್ ವಿಭಿನ್ನ ಪಾತ್ರಗಳ ಮೂಲಕ ತೆರೆ ಮೇಲೆ ಮಿಂಚುತ್ತಿದ್ದಾರೆ. ಇದೀಗ ಅವರ ಹೊಸ ಸಿನಿಮಾದ ಪೋಸ್ಟರ್ ಒಂದು ವೈರಲ್ ಆಗಿದೆ.


ರಾಮನವಮಿ ನಿಮಿತ್ತ ಅವರ ಹೊಸ ಸಿನಿಮಾ ‘ಶಬರಿ’ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರಚಿತಾ ರಗಡ್ ಲುಕ್ ವೈರಲ್ ಆಗಿದೆ. ಟೈಟಲ್ ಜೊತೆಗೆ ‘ರಾವಣನ ಕೊಲ್ಲಲು ಪ್ರತೀ ಬಾರಿಯೂ ರಾಮನೇ ಬರಬೇಕೆಂದಿಲ್ಲ’ ಎಂಬ ಅಡಿಬರಹ ಮತ್ತಷ್ಟು ಕುತೂಹಲ ಮೂಡಿಸಿದೆ.

ಯುವ ನಿರ್ದೇಶಕ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಗೆ ಕೇಶವ್-ಚೇತನ್ ಚಿತ್ರಕತೆ ಬರೆದಿದ್ದಾರೆ. ಹೆಸರೇ ಹೇಳುವಂತೆ ಇದು ಮಹಿಳಾ ಪ್ರಧಾನ ಸಿನಿಮಾವಾಗಿರಲಿದ್ದು, ಥ್ರಿಲ್ಲರ್ ಕತೆಯನ್ನು ಹೊಂದಿದೆಯಂತೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಅನುಪ್ರಭಾಕರ್ ಗೆ ಕೊರೋನಾ ಪಾಸಿಟಿವ್