Publish Date: Fri, 08 Mar 2019 (09:05 IST)
Updated Date: Fri, 08 Mar 2019 (09:06 IST)
ಧರ್ಮಸ್ಥಳ: ಸೀತಾರಾಮ ಕಲ್ಯಾಣ ಸಿನಿಮಾ ಯಶಸ್ಸಿನ ನಂತರ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಇದೀಗ ನಾಯಕಿ ರಚಿತಾ ರಾಮ್ ಸರದಿ.
ನಿಖಿಲ್ ಬಳಿಕ ಇದೀಗ ನಟಿ ರಚಿತಾ ರಾಮ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ತಮ್ಮ ಸಂಗಡಿಗರೊಂದಿಗೆ ಬಂದ ರಚಿತಾ ಬಳಿಕ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಸೀತಾರಾಮ ಕಲ್ಯಾಣ ಮತ್ತು ಪುನೀತ್ ರಾಜ್ ಕುಮಾರ್ ಜತೆಗೆ ನಟಸಿದ ನಟ ಸಾರ್ವಭೌಮ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ರಚಿತಾ ಸದ್ಯಕ್ಕೆ ಬ್ರೇಕ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.