ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡದೇ ಇಲ್ಲ ಅಂದ ಫ್ಯಾನ್ಸ್: ಸಿಟ್ಟಿಗೆ ಕಾರಣವೇನು

Krishnaveni K
ಬುಧವಾರ, 23 ಅಕ್ಟೋಬರ್ 2024 (11:47 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಇಂದಿನ ಎಪಿಸೋಡ್ ನ ಪ್ರೋಮೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಇನ್ನು ಮುಂದೆ ಸೀರಿಯಲ್ ನನ್ನೇ ನೋಡಲ್ಲ ಅಂದಿದ್ದಾರೆ.
 
ಹಿರಿಯ ನಟಿ ಉಮಾಶ್ರೀ, ರಮೇಶ್ ಪಂಡಿತ್ ಮೊದಲಾದವರು ನಟಿಸಿರುವ ಧಾರವಾಹಿಯಲ್ಲಿ ನಾಯಕ ಕಂಠಿ ನಾಯಕಿ ಸ್ನೇಹ ಪಾತ್ರವೇ ಎಲ್ಲರ ಮೆಚ್ಚಿನ ಪಾತ್ರವಾಗಿತ್ತು. ಸ್ನೇಹ-ಕಂಠಿ ಜೋಡಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಆದರೆ ಇನ್ನು ಮುಂದೆ ಸೀರಿಯಲ್ ನಲ್ಲಿ ಈ ಜೋಡಿ ಜೊತೆಯಾಗಿರಲಿಲ್ಲ.

ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಪಾತ್ರವೇ ಕೊನೆಯಾಗುತ್ತಿದೆ. ಡಿಸಿಯಾಗಿರುವ ಸ್ನೇಹ ತನ್ನ ಅತ್ತೆ ಬಂಗಾರಮ್ಮನನ್ನು ಕಾಪಾಡಿ ಮನೆಗೆ ಕರೆತರುವಾಗ ಆಕ್ಸಿಡೆಂಟ್ ಆಗುತ್ತದೆ. ಇದರಲ್ಲಿ ನಾಯಕಿ ಸ್ನೇಹ ಸಾವನ್ನಪ್ಪುತ್ತಾಳೆ. ಈ ಪ್ರೋಮೋವನ್ನು ಈಗಾಗಲೇ ಹರಿಯಬಿಡಲಾಗಿದೆ.

ಇತ್ತೀಚೆಗೆ ಸ್ನೇಹ ಪಾತ್ರ ಮಾಡುತ್ತಿರುವ ನಟಿ ಸಂಜನಾ ಕೆಲವೊಂದು ಗುಡ್ ಬೈ ಹೇಳುವುದು ಕಷ್ಟ ಎಂದಿದ್ದರು. ಆಗಲೇ ವೀಕ್ಷಕರಿಗೆ ಅವರು ಧಾರವಾಹಿ ಬಿಡುತ್ತಿರುವ ಸುಳಿವು ಸಿಕ್ಕಿತ್ತು. ಇದೀಗ ಪಕ್ಕಾ ಆಗಿದೆ. ಧಾರವಾಹಿಯಲ್ಲಿ ಸ್ನೇಹ ಎಂಬ ಮತ್ತೊಬ್ಬ ಹೊಸ ಹುಡುಗಿಯ ಆಗಮನವಾಗಲಿದೆ. ಆಕೆಗೆ ಹೃದಯ ತೊಂದರೆಯಿದ್ದು, ಈಗ ಸ್ನೇಹ ಹೃದಯವನ್ನೇ ಆಕೆಗೆ ಇಟ್ಟು ಪಾತ್ರಕ್ಕೆ ಬೇರೊಂದು ಆಯಾಮ ಕೊಡಲು ನಿರ್ದೇಶಕರು ಹೊರಟಿದ್ದಾರೆ. ಆದರೆ ಇದು ವೀಕ್ಷಕರಿಗೆ ಇಷ್ಟವಾಗಿಲ್ಲ. ಸ್ನೇಹ ನಮ್ಮ ಮೆಚ್ಚಿನ ಪಾತ್ರ. ಸ್ನೇಹ-ಕಂಠಿ ಜೋಡಿ ಇಲ್ಲದ ಮೇಲೆ ನಾವು ಈ ಧಾರವಾಹಿಯನ್ನೇ ನೋಡಲ್ಲ. ನಮ್ಮ ಪಾಲಿಗೆ ಇಂದೇ ಈ ಧಾರವಾಹಿ ಕೊನೆಯ ಸಂಚಿಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments