Publish Date: Tue, 27 Aug 2019 (10:40 IST)
Updated Date: Tue, 27 Aug 2019 (10:41 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನೇಕ ಬಾರಿ ನನಗೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸುವುದು ಇಷ್ಟ ಎಂದಿದ್ದರು. ಈಗ ಅಂತಹದ್ದೇ ಒಂದು ಸುದ್ದಿ ಬಂದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ಚಿತ್ರಕ್ಕೆ ನಾಯಕರಾಗುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ. ಕುಂ ವೀರಭದ್ರಪ್ಪ ಅವರ ಕನಕಾಂಗಿ ಕಲ್ಯಾಣ ಚಿತ್ರದಲ್ಲಿ ಪುನೀತ್ ಅಭಿನಯಿಸಲಿದ್ದಾರೆ.
ಅಂದ ಹಾಗೆ ಈ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂಬುದು ಪಾರ್ವತಮ್ಮ ರಾಜ್ ಕುಮಾರ್ ಕನಸಾಗಿತ್ತಂತೆ. ಈಗ ಆ ಕನಸು ನನಸಾಗುತ್ತಿದೆ. ಆದರೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿರುವುದು ಯಾರು ಎಂಬುದು ಗೊತ್ತಾಗಿಲ್ಲ.