Select Your Language

Notifications

webdunia
webdunia
webdunia
webdunia

ಸೈಕ್ಲಿಂಗ್ ಮಾಡಲು ನನಗೆ ದಿಗಂತ್ ಸ್ಪೂರ್ತಿ ಎಂದಿದ್ದ ಪುನೀತ್ ರಾಜ್ ಕುಮಾರ್

ಸೈಕ್ಲಿಂಗ್ ಮಾಡಲು ನನಗೆ ದಿಗಂತ್ ಸ್ಪೂರ್ತಿ ಎಂದಿದ್ದ ಪುನೀತ್ ರಾಜ್ ಕುಮಾರ್
ಬೆಂಗಳೂರು , ಮಂಗಳವಾರ, 21 ಜೂನ್ 2022 (16:18 IST)
ಬೆಂಗಳೂರು: ಗೋವಾದಲ್ಲಿ ಜಂಪಿಂಗ್ ಮಾಡುವಾಗ ಬೆನ್ನು ಮತ್ತು ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿರುವ ನಟ ದಿಗಂತ್ ಮಂಚಾಲೆ ಈ ರೀತಿ ಸಾಹಸ ಮಾಡುತ್ತಿರುವುದು ಇದೇ ಮೊದಲಲ್ಲ.

ಶೂಟಿಂಗ್ ನಿಂದ ಬಿಡುವು ಸಿಕ್ಕಾಗಲೆಲ್ಲಾ ಸೈಕ್ಲಿಂಗ್ ಮಾಡುವುದು, ಪ್ರವಾಸೀ ತಾಣಗಳಿಗೆ ತೆರಳುವುದು, ಡೈವ್ ಹೊಡೆಯುವುದು, ಸರ್ಫಿಂಗ್ ಮಾಡುವುದು ಇತ್ಯಾದಿ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದಕ್ಕೆ ಪತ್ನಿ ಐಂದ್ರಿತಾ ಕೂಡಾ ಸಾಥ್ ನೀಡುತ್ತಾರೆ.

ಆದರೆ ಈ ಬಾರಿ ಮಾತ್ರ ಎಡವಟ್ಟಾಗಿರುವುದು ಖೇದದ ಸಂಗತಿ. ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ನನಗೆ ಸೈಕ್ಲಿಂಗ್ ಮಾಡುವುದರಲ್ಲಿ ದಿಗಂತ್ ಸ್ಪೂರ್ತಿ ಎಂದಿದ್ದರು. ಇಂತಹ ಸಾಹಸಗಳನ್ನು ಮಾಡುವಾಗ ಸ್ವಲ್ಪವೇ ಎಚ್ಚರ ತಪ್ಪಿದರೂ ಅವಘಡ ತಪ್ಪಿದ್ದಲ್ಲ ಎನ್ನುವುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ದಿಗಂತ್ ಮಂಚಾಲೆಗೆ ಗೋವಾದಲ್ಲಿ ಅವಘಡ: ಸ್ಥಿತಿ ಚಿಂತಾಜನಕ