Select Your Language

Notifications

webdunia
webdunia
webdunia
webdunia

ತಮ್ಮ ಊರಿನಲ್ಲೊಂದು ಒಳ್ಳೆ ಕೆಲಸ ಮಾಡಿದ ಒಳ್ಳೆ ಹುಡುಗ ಪ್ರಥಮ್

ತಮ್ಮ ಊರಿನಲ್ಲೊಂದು ಒಳ್ಳೆ ಕೆಲಸ ಮಾಡಿದ ಒಳ್ಳೆ ಹುಡುಗ ಪ್ರಥಮ್
ಬೆಂಗಳೂರು , ಮಂಗಳವಾರ, 29 ಮೇ 2018 (07:59 IST)
ಬೆಂಗಳೂರು : ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಆದ ಒಳ್ಳೆ ಹುಡುಗ ಪ್ರಥಮ್ ಅವರು ಇದೀಗ ತಮ್ಮ ಊರಿನಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ.


ಬಿಗ್ ಬಾಸ್ ಸೀಸನ್ 4 ರ ಸ್ಪರ್ಧಿಯಾದ ಪ್ರಥಮ್ ಅವರು ಬಿಗ್ ಬಾಸ್ ನ ವಿನ್ನರ್ ಆದ್ರೆ ಆ ಹಣದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅಂದು ಹೇಳಿದಂತೆ ಇದೀಗ ಅವರು ತಮ್ಮ ಊರಿನಲ್ಲೊಂದು ಶಿವಲಂಕಾರೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದು, ಅದರ ಪೂಜೆ ಪುನಸ್ಕಾರಗಳೂ ಕೂಡ ಆರಂಭವಾಗಿವೆ.


ಈ ಬಗ್ಗೆ ಮಾತನಾಡಿದ ಪ್ರಥಮ್ ‘ಕೆಲವು ಕೆಲಸ ತುಂಬಾ ಆತ್ಮತೃಪ್ತಿ ಕೊಡುತ್ತೆ. ಅವತ್ತು ಹೇಳಿದ್ದೆ. ಬಿಗ್ಬಾಸ್ ಗೆದ್ದ ದುಡ್ಡಲ್ಲಿ ಏನಾದ್ರು ಮಾಡ್ಬೇಕು ಅಂತ. ನಮ್ಮೂರಲ್ಲಿ ಹಿರಿಯರ ಜೊತೆ ಸೇರಿ ಶಿವಾಲಂಕಾರೇಶ್ವರ ದೇವಸ್ಥಾನ ಕಟ್ಟುವ ಪ್ರಯತ್ನಕ್ಕೆ ಸಣ್ಣದಾಗಿ ಕೈಜೋಡಿದಿದೆ.ಇತ್ತೀಚೆಗೆ ಅದರ ಉದ್ಘಾಟನೆ ಆಯ್ತು. ನನ್ನನ್ನೇ ಮುಖ್ಯ ಅತಿಥಿಯಾಗಿ ಕರೆದಿದ್ರು. ತುಂಬಾ ಹೆಮ್ಮೆ ಅನ್ನುಸ್ತು. ಕೆಲವು ಕೆಲಸಗಳು ಕೊಡೋ ಆತ್ಮತೃಪ್ತಿ ಇನ್ನೆಲ್ಲೂ ಸಿಗಲ್ಲ! ಯಾಕೋ ನನ್ನೂರಲ್ಲಿ ದೊಡ್ಡವರ ಮುಂದೆ stage ಮೇಲೆ ಕೂತ್ಕೊಳ್ಳೋಕೆ ಒಂಥರಾ. ಒಂದೆರಡು ದಿನ ಆದ್ಮೇಲೆ ನಾನೇ ಹೋಗಿ ನಮ್ ದೇವಸ್ಥಾನ ನೋಡಿ ಖುಷಿಯಿಂದ ಬಂದೆ. ಆದಷ್ಟು ಬೇಗ ಬೋರ್ ಹಾಕಿಸ್ಬೇಕು ದೇವಸ್ಥಾನಕ್ಕೆ ಅಂತ ನಿರ್ಧಾರ ಮಾಡಿದ್ದೀನಿ. ನಿಜಕ್ಕೂ ಇವತ್ ಸಕ್ಕತ್ ಖುಷಿ ಆಗ್ತಿದೆ. ನನ್ನೂರು ನನಗೆ ಹೆಮ್ಮೆ’  ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಓಲಾ ಚಾಲಕನ ವಿರುದ್ಧ ಕಿಡಿಕಾರಿದ ನಟಿ ಪಾರೂಲ್ ಯಾದವ್