Select Your Language

Notifications

webdunia
webdunia
webdunia
webdunia

ಎರಡು ವರ್ಷ ಸ್ಯಾಂಡಲ್ ವುಡ್ ಗೆ ಬರಲ್ಲ ಪ್ರಶಾಂತ್ ನೀಲ್!

ಎರಡು ವರ್ಷ ಸ್ಯಾಂಡಲ್ ವುಡ್ ಗೆ ಬರಲ್ಲ ಪ್ರಶಾಂತ್ ನೀಲ್!
ಬೆಂಗಳೂರು , ಸೋಮವಾರ, 23 ಮೇ 2022 (09:10 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಈಗ ಅತ್ಯಂತ ಬ್ಯುಸಿ ನಿರ್ದೇಶಕ.

ಸದ್ಯಕ್ಕೆ ಪ್ರಶಾಂತ್ ತೆಲುಗಿನಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ ಸಲಾರ್ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಇದಲ್ಲದೆ ಜೂ. ಎನ್ ಟಿಆರ್ ಜೊತೆಗೆ ಮೊನ್ನೆಯಷ್ಟೇ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ.

ಹೀಗಾಗಿ ಮುಂದಿನ ಎರಡು ವರ್ಷಗಳಿಗೆ ಪ್ರಶಾಂತ್ ತೆಲುಗಿನಲ್ಲೇ ಬ್ಯುಸಿಯಾಗಿರಲಿದ್ದು, ಸ್ಯಾಂಡಲ್ ವುಡ್ ಗೆ ಮರಳುವುದು ಅನುಮಾನ. ಹಾಗಿದ್ದರೂ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾದ ಕತೆ ಬರೆಯುವ ಮೂಲಕ ಸ್ಯಾಂಡಲ್ ವುಡ್ ನಂಟನ್ನು ಸಂಪೂರ್ಣವಾಗಿ ಬಿಟ್ಟಿಲ್ಲ ಎಂದು ತೋರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂ.ಎನ್ ಟಿಆರ್ ಜೊತೆ ನಟಿಸಲು ದೀಪಿಕಾ ಪಡುಕೋಣೆಯೂ ಒಲ್ಲೆನೆಂದರಂತೆ!