Select Your Language

Notifications

webdunia
webdunia
webdunia
webdunia

‘ರಾಧೆ ಶ್ಯಾಮ್’ ಚಿತ್ರದ ನಿರ್ದೇಶಕರ ಮೇಲೆ ಕೆಂಡಕಾರಿದ ಪ್ರಭಾಸ್ ಅಭಿಮಾನಿಗಳು

‘ರಾಧೆ ಶ್ಯಾಮ್’ ಚಿತ್ರದ ನಿರ್ದೇಶಕರ ಮೇಲೆ ಕೆಂಡಕಾರಿದ ಪ್ರಭಾಸ್ ಅಭಿಮಾನಿಗಳು
ಹೈದರಾಬಾದ್ , ಬುಧವಾರ, 24 ಮಾರ್ಚ್ 2021 (10:54 IST)
ಹೈದರಾಬಾದ್ : ಪ್ರಭಾಸ್ ಅವರ ಮುಂದಿನ ಚಿತ್ರ ‘ರಾಧೆ ಶ್ಯಾಮ್’ ಜುಲೈ 30ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರದ ಬಗ್ಗೆ ಯಾವುದೇ ಪ್ರಚಾರ ಕಾರ್ಯಗಳನ್ನು ಮಾಡದ ಕಾರಣ ಪ್ರಭಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಭಾಸ್ ಅಭಿನಯದ ಸಲಾರ್ ಮತ್ತು ಆದಿಪುರುಷ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಅನ್ನು ನೀಡುತ್ತಿದೆ. ಆದರೆ ರಾಧೆ ಶ್ಯಾಮ್ ಚಿತ್ರತಂಡ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ ಪ್ರೊಡಕ್ಷನ್ ಹೌಸ್ ಯುವಿ ಕ್ರಿಯೇಷನ್ಸ್ ಮತ್ತು ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ತನ್ನ ನಾಯಕಿ ಕೀರ್ತಿ ಸುರೇಶ್ ಕಾಣೆಯಾಗಿದ್ದಾರೆ ಎಂದು ನಿತಿನ್ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗಾಗಿ ಪೋಸ್ಟ್ ಮಾಡಿದಾಗ ಇದಕ್ಕೆ ಪೊಲೀಸ್ ಅಧಿಕಾರಿಗಳು ಅವರನ್ನು ಕಾಳಜಿ ವಹಿಸುತ್ತೇವೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇದಕ್ಕೆ ಪ್ರಭಾಸ್ ಅಭಿಮಾನಿಗಳು ಕೋಪದಿಂದ ಪೊಲೀಸ್ ಅಧಿಕಾರಿಗಳ ಬಳಿ ರಾಧಾ ಕೃಷ್ಣ ಕುಮಾರ್ ಕಾಣೆಯಾಗಿದ್ದಾರೆ . ಅವರನ್ನು ಹಿಡಿದುಕೊಡಿ ಎಂದು ಹೇಳಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಲಿಗರ್ ಚಿತ್ರದಲ್ಲಿ ನಟಿಸಲಿದ್ದಾರೆ ಮತ್ತೊಬ್ಬ ಬಾಲಿವುಡ್ ನಟಿ